ಶಿಕ್ಷಕರ ಮೇಲೆ ದಬ್ಬಾಳಿಕೆಯೋ.. ನಿಷ್ಕರುಣೆಯೋ…..ಸಾರಿಗೆ ಆರಂಭಿಸಿ….. ಶಾಲೆ ಪ್ರಾರಂಭಿಸಿ

Suddi Sante Desk

ಬೆಂಗಳೂರು –

10/6/2021 ರಂದು ಮಾನ್ಯ ಆಯುಕ್ತರು ಸಾ.ಶಿ.ಇ ಬೆಂಗಳೂರು ಅವರು ಜೂನ್ 15 ರಿಂದ ದಾಖಲಾತಿ ಹಾಗೂ ಪೂರ್ವಸಿದ್ಧತೆ ಮಾಡಿಕೊಳ್ಳಲು ಸುತ್ತೋಲೆ ಯನ್ನು ಹೊರಡಿಸಿದ್ದಾರೆ.

ಆದರೆ ಮರುದಿನ 11/6/2021 ರಂದು ರಾಜ್ಯ ಸರ್ಕಾರದ ಕಾರ್ಯದರ್ಶಿಗಳು 21/6/2021 ರವರೆಗೆ 11 ಜಿಲ್ಲೆಗಳಲ್ಲಿ ಲಾಕ್ ವಿಸ್ತರಿಸಿ ಆದೇಶಿ ಸಿದ್ದು ಇನ್ನುಳಿದ ಜಿಲ್ಲೆಗಳಿಗೆ ಪರಿಷ್ಕೃತ ಮಾರ್ಗಸೂ ಚಿಗಳನ್ನು ಪ್ರಕಟಿಸಿರುತ್ತಾರೆ.ಈ ಮಾರ್ಗಸೂಚಿಯಲ್ಲಿ ಕೆಲವು ಇಲಾಖೆಗಳು 50% ನೌಕರರ ಹಾಜರಾತಿ ಯೊಂದಿಗೆ ಮಾತ್ರ ಕಾರ್ಯ ನಿರ್ವಹಿಸಲು ಆದೇಶಿ ಸಿದ್ದಾರೆ.

ಅಂದರೆ ಶಿಕ್ಷಣ ಇಲಾಖೆಯಲ್ಲಿ ನೌಕರರು/ ಶಿಕ್ಷಕರು ಕಾರ್ಯ ನಿರ್ವಹಿಸಲು ಅವಕಾಶವಿಲ್ಲ.ರಾಜ್ಯ ಸರ್ಕಾ ರದ ಮುಖ್ಯ ಕಾರ್ಯದರ್ಶಿಗಳ ಸೂಚನೆಗಳನ್ವಯ ಶಿಕ್ಷಣ ಇಲಾಖೆಯೂ ಸೇರಿದಂತೆ ಹಲವಾರು ಇಲಾ ಖೆಗಳು ಕಚೇರಿಗಳನ್ನು ತೆರೆಯಲು ಕಾರ್ಯನಿರ್ವ ಹಿಸಲು ಅವಕಾಶ ನೀಡಲಾಗಿಲ್ಲ.

ದಿನಾಂಕ 10/6/2021 ರಂದು ಮಾನ್ಯ ಆಯುಕ್ತರು ಸಾ.ಶಿ.ಇ ಇವರು ಹೊರಡಿಸಿದ ಮಾರ್ಗಸೂಚಿಗಳ ಸುತ್ತೋಲೆಯಲ್ಲಿ ಕಾಲ ಕಾಲಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತಗಳು ಹೊರಡಿಸುವ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಸೂಚಿಸ ಲಾಗಿದೆ.

ದಿನಾಂಕ 11/6/2021 ರಂದು ರಾಜ್ಯ ಸರ್ಕಾರವು ಹೊರಡಿಸಿದ ಆದೇಶವನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಲೇಬೇಕು.

ಹೀಗಾಗಿ 21/6/2021 ರವರೆಗೆ ಶಿಕ್ಷಕರು ಶಾಲೆಗಳಿಗೆ ತೆರಳಿ ಕರ್ತವ್ಯ ನಿರ್ವಹಿಸಬೇಕಾಗಿಲ್ಲ.ಅಲ್ಲವೇ??

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.