ಸಚಿವರಾದ ಬೆನ್ನಲ್ಲೇ ಹೊಸದೊಂದು ಸರಳತೆಯ ಮೂಲಕ ಮಾದರಿಯಾದ ಸಂತೋಷ ಲಾಡ್ – ಅಭಿಮಾನಿಗಳಿಗೆ ಸಚಿವರು ಕೊಟ್ಟ ಸಂದೇಶ ಏನು ಗೊತ್ತಾ…..

Suddi Sante Desk
ಸಚಿವರಾದ ಬೆನ್ನಲ್ಲೇ ಹೊಸದೊಂದು ಸರಳತೆಯ ಮೂಲಕ ಮಾದರಿಯಾದ ಸಂತೋಷ ಲಾಡ್ – ಅಭಿಮಾನಿಗಳಿಗೆ ಸಚಿವರು ಕೊಟ್ಟ ಸಂದೇಶ ಏನು ಗೊತ್ತಾ…..

ಧಾರವಾಡ

ಹೌದು ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಸಂತೋಷ ಲಾಡ್ ಗೆ ಸಚಿವ ಸ್ಥಾನ ಒದಗಿ ಬಂದಿದ್ದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಸಂತೋಷ ಲಾಡ್ ರು ಹೊಸದೊಂದು ಸಂಸ್ಕೃತಿಯ ಮೂಲಕ ಮಾದರಿ ಯಾಗಿ ಹೊಸತನಕ್ಕೆ ಮುನ್ನುಡಿ ಬರೆದಿದ್ದಾರೆ

ಹೌದು ಸಾಮಾನ್ಯವಾಗಿ ಶಾಸಕರು ಅದರಲ್ಲೂ ಸಚಿವ ರಾದ ಮೇಲೆ ಶುಭಾಶಯ ಹೇಳಲು ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಬರುತ್ತಾರೆ ಹೀಗೆ ಬರುವವರಿಗೆ ಸಂತೋಷ ಲಾಡ್ ಒಳ್ಳೆಯ ಸಂದೇಶ ವನ್ನು ನೀಡಿದ್ದಾರೆ

ಆತ್ಮೀಯ ಅಭಿಮಾನಿಗಳು ಹಾಗೂ ಹಿತೈಷಿಗಳಲ್ಲಿ ನನ್ನದೊಂದು ಮನವಿ.

ನನ್ನನ್ನು ಅಭಿನಂದಿಸಲು ಸಾವಿರಾರು ಸಂಖ್ಯೆ ಯಲ್ಲಿ ಆಗಮಿಸುತ್ತಿದ್ದೀರಿ.ನಿಮ್ಮ ಪ್ರೀತಿ, ಅಭಿಮಾನ ಕಂಡು ನಿಜಕ್ಕೂ ನನ್ನ ಮನಸ್ಸು ತುಂಬಿ ಬಂದಿದೆ.ದಯವಿಟ್ಟು ಇನ್ನೂ ಮುಂದೆ ಯಾರೇ ಬಂದರೂ ಜೊತೆಯಲ್ಲಿ ಹಾರ ಹೂಗುಚ್ಚ ಶಾಲು ಮುಂತಾದವುಗಳನ್ನು ತರಬೇಡಿ.ನಿಮ್ಮ ಪ್ರೀತಿಯನ್ನು ಕೇವಲ ಶುಭ ಹಾರೈಕೆಯ ಮೂಲಕ ಮಾತ್ರ ವ್ಯಕ್ತಪಡಿಸಿ ಎಂದಿದ್ದಾರೆ

ನಿಮಗೆ ನಿಜವಾಗಿಯೂ ನನ್ನ ಮೇಲೆ ಅಭಿ ಮಾನವಿದ್ದರೆ ದಯವಿಟ್ಟು ಹಾರ-ತುರಾಯಿಗೆ ವೆಚ್ಚ ಮಾಡುವ ಹಣದಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿ ಎಂದು ವಿನಂತಿಸುತ್ತೇನೆ ಎಂಬ ಸಂದೇಶ ವನ್ನು ನೀಡಿ ದ್ದಾರೆ.

‘ವಿದ್ಯಾದಾನ ಮಹಾದಾನ’ನಿಮ್ಮ ಸಂತೋಷ್ ಲಾಡ್

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.