ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ ಚುರುಕುಗೊಂಡ ತನಿಖೆ ಬಂಧಿತ ಶಿಕ್ಷಕರೊಂದಿಗೆ ಯಾರು ಯಾರನ್ನು ವಿಚಾರಣೆ ಮಾಡತಾ ಇದ್ದಾರೆ ಗೊತ್ತಾ‌…..

Suddi Sante Desk

ಬೆಂಗಳೂರು –

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಅಧಿಕಾರವಧಿ ಯಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.ಪ್ರಕರಣ ಸಂಬಂಧ ಬಂಧಿತ ಶಿಕ್ಷಕರನ್ನು 8 ದಿನ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿರು ಸಿಐಡಿ ಗೆ ತನಿಖೆ ವೇಳೆ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ.ಬಂಧಿತರು ಶಿಕ್ಷಕರಾಗಿದ್ದು ಹೇಗೆ ಅನ್ನುವ ಮಾಹಿತಿಯನ್ನು ಸಿಐಡಿ ಕಲೆ ಹಾಕಿದೆ. ಸಾಮಾನ್ಯ ವಾಗಿ ಸರ್ಕಾರಿ ಹುದ್ದೆಗೆ ಅಪ್ಲಿಕೇಶನ್ ಹಾಕಿ,ಎಕ್ಸಾಂ ಬರೆದ್ರೂ ಕೂಡ ಹುದ್ದೆ ಸಿಗಲ್ಲ.

ಅದರೆ ಬಂಧಿತ 11 ಶಿಕ್ಷಕರಲ್ಲಿ ಎರಡು ಜನ ಶಿಕ್ಷಕರಿಗೆ ಯಾವುದೇ ಅಪ್ಲಿಕೇಶನೇ ಹಾಕದೇ ಶಿಕ್ಷಕರ ಹುದ್ದೆಗೆ ನೇಮಕವಾಗಿದ್ದಾರೆ.ಈ ಹಿನ್ನೆಲೆ ಅರ್ಜಿಯನ್ನು ಹಾಕದೇ ಹೇಗೇ ನೀವು ಸಲೆಕ್ಟ ಆಗಿದ್ದೀರಾ ಇದಕ್ಕೆ ನಿಮಗೆ ಸಹಾಯ ಮಾಡಿದ್ದು ಯಾರು ಎಂಬೆಲ್ಲಾ ಪ್ರಶ್ನೆಗಳನ್ನು ಸಿಐಡಿ ಕೇಳಿದೆ. ಫಸ್ಟ್ ಲಿಸ್ಟ್ ನಲ್ಲಿ ಸೆಲೆಕ್ಟ್ ಅದರೆ ಎಲ್ಲರಿಗೊ ತಿಳಿಯತ್ತೇ ಹಾಗಾಗಿ ಸಂಪೂರ್ಣವಾಗಿ ಸೆಕೆಂಡ್ ಲಿಸ್ಟ್ ಟಾರ್ಗೆಟ್ ಮಾಡಿದರು.ಕಡಿಮೆ ಮಾರ್ಕ್ಸ್ ಬಂದಿದ್ರು ಎಲ್ಲರೂ ಸೆಕೆಂಡ್ ಲಿಸ್ಟ್ ನಲ್ಲಿ ಸೆಲೆಕ್ಟ್ ಆಗಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಕಾನೂನಿಗೆ ಮಣ್ಣೆರೆಚುವ ಕೆಲಸ ಮಾಡಿರುವುದು CID ತನಿಖೆಯಲ್ಲಿ ಬಯಲಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.