ಸರ್ಕಾರಿ ನೌಕರರ ವೇತನ ಆಯೋಗದ ಹಿಂದಿನ ಚಿತ್ರಣ ಹೇಗಿದೆ ಗೊತ್ತಾ – ಈ ಹಿಂದೆ ವೇತನ ಆಯೋಗಕ್ಕೆ ಯಾರು ಯಾರು ಅಧ್ಯಕ್ಷರಾಗಿದ್ದರು ವೇತನ ಆಯೋಗದ ಹಿಂದಿನ ಚಿತ್ರಣ ಕುರಿತಂತೆ ಅರುಣ ಹುಡೇದಗೌಡ್ರು ಅವರಿಂದ ಒಂದಿಷ್ಟು ಮಾಹಿತಿ

Suddi Sante Desk
ಸರ್ಕಾರಿ ನೌಕರರ ವೇತನ ಆಯೋಗದ ಹಿಂದಿನ ಚಿತ್ರಣ ಹೇಗಿದೆ ಗೊತ್ತಾ – ಈ ಹಿಂದೆ ವೇತನ ಆಯೋಗಕ್ಕೆ ಯಾರು ಯಾರು ಅಧ್ಯಕ್ಷರಾಗಿದ್ದರು ವೇತನ ಆಯೋಗದ ಹಿಂದಿನ ಚಿತ್ರಣ ಕುರಿತಂತೆ ಅರುಣ ಹುಡೇದಗೌಡ್ರು ಅವರಿಂದ ಒಂದಿಷ್ಟು ಮಾಹಿತಿ

ಹಾವೇರಿ

ಕಳೆದ ಹಲವಾರು ದಿನಗಳಿಂದ ರಾಜ್ಯದ ಸರ್ಕಾರಿ ನೌಕಕರು ಬಹುಕಾತುರದಿಂದ ಕಾಯುತ್ತಿದ್ದ 7ನೇ ವೇತನ ಆಯೋಗದ ವಿಚಾರ ಕುರಿತಂತೆ ಕೊನೆಗೂ ರಾಜ್ಯದ ಮುಖ್ಯಮಂತ್ರಿ ಸಮಿತಿಗೆ ಅಧ್ಯಕ್ಷರನ್ನು ಘೋಷಣೆ ಮಾಡಿದ್ದಾರೆ.

ಆವಾಗ ಈವಾಗ ಆಗುತ್ತದೆ ನಮಗೂ ಕೂಡಾ 7ನೇ ವೇತನ ಆಯೋಗ ಯಾವಾಗ ಕೈ ಸೇರುತ್ತದೆ ಎಂದುಕೊಂಡು ಜಾತಕ ಪಕ್ಷಿಯಂತೆ ಕಾಯುತ್ತಿದ್ದ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಬಂಧುಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುಡ್ ನ್ಯೂಸ್ ನೀಡಿದ್ದು ಈ ಒಂದು ವೇತನ ಆಯೋಗದ ಜವಾಬ್ದಾರಿಯನ್ನು ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ಅವರ ಹೆಗಲಿಗೆ ನೀಡಿದ್ದು

ಇದು ಒಂದು ವಿಚಾರವಾದರೆ ಇಧೇನಿದು ದೊಡ್ಡ ವಿಚಾರವೇನಲ್ಲ ಕಾಲ ಕಾಲಕ್ಕೆ ಹಂತ ಹಂತವಾಗಿ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಯಾವುದೇ ಮನವಿ ಬೇಡಿಕೆ ಬರುವ ಮುಂಚಿತ ವಾಗಿಯೇ ಈ ಒಂದು ವೇತನ ಪರಿಷ್ಕ್ರರಣೆಯನ್ನು ಸರ್ಕಾರಿ ನೌಕರಿಗೆ ನೀಡಬೇಕು ಆದರೆ ಈ ಬಾರಿಯ ವೇತನ ಪರಿಷ್ಕ್ರರಣೆಗೆ ಸಧ್ಯ ಸಮಿತಿ ಯನ್ನು ರಚನೆ ಮಾಡಿದ್ದು ಸಧ್ಯ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು ಈ ಒಂದು ಸಂತೋಷ ಕ್ಕಾಗಿ ಈಗಾಗಲೇ ರಾಜ್ಯದ ಸರ್ಕಾರಿ ನೌಕರರ ಸಂಘದಿಂದ ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದ ಕೆಲ ಸಚಿವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಗೌರವಿಸಲಾಗಿದೆ ಇದು ಒಂದು ವಿಚಾರ ವಾದರೆ ಇನ್ನೂ ಈ ಹಿಂದಿನ ವೇತನ ಆಯೋಗದ ಚಿತ್ರವನ್ನು ನೊಡೋದಾದರೆ

ನ್ಯಾ.ಬಿ. ವೆಂಕಟಸ್ವಾಮಿ ನೇತೃತ್ವದ 3ನೇ ವೇತನ ಆಯೋಗವನ್ನು(1986-92)ರಲ್ಲಿ ರಚನೆ ಮಾಡಲಾಗಿತ್ತು ಇನ್ನೂ ನ್ಯಾ. ಕೆ. ಜಗನ್ನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ಮಾಡಲಾಗಿತ್ತು 4ನೇ ವೇತನ ಆಯೋಗವನ್ನು (1992-98)ರಲ್ಲಿ ರಚನೆ ಮಾಡಲಾಗಿತ್ತು

ಇನ್ನೂ ಹಣಕಾಸು ಇಲಾಖೆ ಕಾರ್ಯದರ್ಶಿ ಗೋಪಾಲ ರೆಡ್ಡಿ ನೇತೃತ್ವದ ಅಧಿಕಾರಿ ಸಮಿತಿ ರಚನೆ ಮಾಡಲಾಗಿತ್ತು(1998-2006)5ನೇ ವೇತನ ಆಯೋಗವನ್ನು ರಚಿಸಲಾಗಿತ್ತು

ಎಂ.ಬಿ.ಪ್ರಕಾಶ್ ಅವರಿಗೆ 6ನೇ ವೇತನ ಆಯೋಗದ ಜವಾಬ್ದಾರಿಯನ್ನು ನೀಡಲಾಗಿತ್ತು (2005-2011) ಅಧಿಕಾರಿ ಸಮಿತಿ ಸುಬೀರ್ ಹರಿಸಿಂಗ್ (2011-2017) ಆಯೋಗ ಎಂ.ಆರ್. ಶ್ರೀನಿವಾಸಮೂರ್ತಿ (2017-22) ನೇತೃತ್ವದಲ್ಲಿ ಕಾರ್ಯನಿರ್ವಹಿಸಿದ್ದವು ಸಧ್ಯ 7ನೇ ವೇತನ ಆಯೋಗದ ಜವಾಬ್ದಾರಿಯನ್ನು ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ಅವರಿಗೆ ಜವಾಬ್ದಾರಿಯನ್ನು ನೀಡಲಾಗಿದ್ದು

ಸಧ್ಯ ಇವರು ಈ ಒಂದು ಸಮಿತಿಯ ನೇತ್ರತ್ವ ವನ್ನು ವಹಿಸಿಕೊಂಡಿದ್ದು ಒಂದೇರೆಡು ತಿಂಗಳಲ್ಲಿ ಸಂಪೂರ್ಣವಾಗಿ ಅದ್ಯಯನ ಮಾಡಿ ಸಮಗ್ರ ವಾದ ವರದಿಯನ್ನು ಸಿದ್ದಮಾಡಿ ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಲಿ ದ್ದು ನಂತರ ರಾಜ್ಯ ಸರ್ಕಾರವು ಇದನ್ನು ಜಾರಿಗೆ ತರಲಿದೆ

ಮಾಹಿತಿ ವರದಿ –  ಅರುಣ ಹುಡೇಗೌಡ್ರು

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.