ಡೊಂಬರಿಕೊಪ್ಪ ತುಂಬೆಲ್ಲಾ ಡಂ ಡಂ ಸದ್ದು ಮಾಡುತ್ತಿರುವ ಛಬ್ಬಿ ಕುಕ್ಕರ್ ಗಳು – ಕ್ಷೇತ್ರದಲ್ಲಿ ಹೋದಲ್ಲೇಲ್ಲ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರಿಗೆ ಕಂಡು ಬರುತ್ತಿದೆ ಅಭೂತಪೂರ್ಣ ಬೆಂಬಲ ಸ್ಪಂದನೆ

Suddi Sante Desk
ಡೊಂಬರಿಕೊಪ್ಪ ತುಂಬೆಲ್ಲಾ ಡಂ ಡಂ ಸದ್ದು ಮಾಡುತ್ತಿರುವ ಛಬ್ಬಿ ಕುಕ್ಕರ್ ಗಳು – ಕ್ಷೇತ್ರದಲ್ಲಿ ಹೋದಲ್ಲೇಲ್ಲ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರಿಗೆ ಕಂಡು ಬರುತ್ತಿದೆ ಅಭೂತಪೂರ್ಣ ಬೆಂಬಲ ಸ್ಪಂದನೆ

ಕಲಘಟಗಿ –

ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ನಾಗರಾಜ ಛಬ್ಬಿ ಟೀಮ್ ನಿಂದ ನಡೆಯುತ್ತಿರುವ ಕುಕ್ಕರ್ ವಿತರಣೆ ಕಾರ್ಯ ಮುಂದುವರೆದಿದೆ.ಕಳೆದ ಒಂದೂವರೆ ತಿಂಗಳಿ ನಿಂದ ನಿರಂತರವಾಗಿ ಕಲಘಟಗಿ ಕ್ಷೇತ್ರದಲ್ಲಿ ಬಿಡುವಿಲ್ಲದೇ ಸುತ್ತಾಡುತ್ತಾ ಕ್ಷೇತ್ರದಲ್ಲಿನ ಪ್ರತಿ ಯೊಂದು ಗ್ರಾಮಕ್ಕೂ ತೆರಳಿ ಕುಕ್ಕರ್ ಗಳನ್ನು ವಿತರಣೆಯನ್ನು ಮಾಡುತ್ತಿದ್ದು

ಒಂದು ಕಡೆಗೆ ನಾಗರಾಜ ಛಬ್ಬಿ ಅವರು ಪಕ್ಷದ ಕಾರ್ಯಕರ್ತರು ಮುಖಂಡರು ಆಪ್ತರೊಂದಿಗೆ ಊರುರು ಸುತ್ತಾ ಡುತ್ತಿದ್ದರೆ ಮತ್ತೊಂದು ಕಡೆಗೆ ಪತಿಯ ಪರವಾಗಿ ಅವರ ಪತ್ನಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರು ಕೂಡಾ ಕಾಲಿಗೆ ಚಕ್ರ ವನ್ನು ಕಟ್ಟಿಕೊಂಡ ವಂತೆ ತಿರುಗಾಡುತ್ತಿದ್ದಾರೆ.

ಕೇವಲ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡು ಕುಕ್ಕರ್ ಗಳನ್ನು ವಿತರಣೆ ಮಾಡದೇ ಪ್ರತಿಯೊಂದು ಗ್ರಾಮದಲ್ಲಿ ಮೊದಲು ಯಾವು ದಾದರೊಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ಯನ್ನು ಸಲ್ಲಿಸಿ ನಂತರ ಗ್ರಾಮಸ್ಥರೊಂದಿಗೆ ಸಭೆ ಯನ್ನು ಮಾಡಿ ಸಮಸ್ಯೆಗಳನ್ನು ಆಲಿಸುತ್ತಾರೆ.

ಗ್ರಾಮದಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಕೊಂಡು ನಂತರ ಅವುಗಳ ಕುರಿತಂತೆ ಬರುವ ದಿನಗಳಲ್ಲಿ ಈಡೇರಿಸುವ ಭರವಸೆಯನ್ನು ನೀಡಿ ನಂತರ ಮನೆ ಮನೆಗೆ ತೆರಳಿ ಕುಕ್ಕರ್ ಗಳನ್ನು ವಿತರಣೆ ಮಾಡುತ್ತಿದ್ದು ಕ್ಷೇತ್ರದ ಡೊಂಬರಿಕೊಪ್ಪ ಕುಕ್ಕರ್ ಗಳ ವಿತರಣೆ ನಡೆಯಿತು.ಗ್ರಾಮದಲ್ಲಿ ವಿಶೇಷ ಸಭೆಯನ್ನು ಮಾಡಿದ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರು ನಂತರ ಗ್ರಾಮದ ತುಂಬೆಲ್ಲಾ ಮನೆ ಮನೆಗೆ ತೆರಳಿ ಕುಕ್ಕರ್ ಗಳನ್ನು ವಿತರಣೆ ಯನ್ನು ಮಾಡಿದರು.ಜ್ಯೋತಿ ನಾಗರಾಜ ಛಬ್ಬಿ ಅವರೊಂದಿಗೆ ಗುರುನಾಥ ದಾನವನ್ನವರ,

ಬಸವರಾಜ ಹಡಪದ,ಗೋಪಾಲ ಮೇಕಲ, ಅರ್ಜುನ ಅಂಗಡಿ,ವಿರೇಶ ಚನ್ನಬತ್ತಿ,ಶಿವಪ್ಪ ಇಮ್ಮಡಿ,ಶಂಕ್ರಪ್ಪ ಡೊದಮುಗದ,ಯಲ್ಲಪ್ಪ ರಾಮನಿ,ಮಲ್ಲಿಕಾರ್ಜುನ ಬಡಿಗೇರ,ಕಾಡಪ್ಪ ಮಾಂದೇಕರ,ಗುರುಸಿದ್ದಯ್ಯ ಹಿರೇಮಠ,ರಾಜು ಹಿರೇಮಠ,ಯಲ್ಲಪ್ಪ ರಾಮನಿ,ಸಹದೇವಪ್ಪ ಆಹೋಜಿ,ಮಂಜು ಮೊರಬದ,ಸೇರಿದಂತೆ ಗ್ರಾಮದ ಗುರು ಹಿರಿಯರು ಪಕ್ಷದ ಕಾರ್ಯಕ ರ್ತರು ಆಪ್ತರು ಮಹಿಳೆಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.