ಮೇಯರ್ ರೊಂದಿಗೆ ತೋಳನಕೆರೆಗೆ ಭೇಟಿ ನೀಡಿದ ಆಯುಕ್ತರು – ಕೆರೆಯಲ್ಲಿನ ಸ್ವಚ್ಚತೆ ಪರಿಶೀಲನೆ…..ಸ್ವಚ್ಚತೆ ಕಾಪಾಡುವಂತೆ ಖಡಕ್ ಸೂಚನೆ ನೀಡಿದ ಡಾ ಈಶ್ವರ ಉಳ್ಳಾಗಡ್ಡಿ..‌‌‌…

Suddi Sante Desk
ಮೇಯರ್ ರೊಂದಿಗೆ ತೋಳನಕೆರೆಗೆ ಭೇಟಿ ನೀಡಿದ ಆಯುಕ್ತರು – ಕೆರೆಯಲ್ಲಿನ ಸ್ವಚ್ಚತೆ ಪರಿಶೀಲನೆ…..ಸ್ವಚ್ಚತೆ ಕಾಪಾಡುವಂತೆ ಖಡಕ್ ಸೂಚನೆ ನೀಡಿದ ಡಾ ಈಶ್ವರ ಉಳ್ಳಾಗಡ್ಡಿ..‌‌‌…

ಹುಬ್ಬಳ್ಳಿ

ಹುಬ್ಬಳ್ಳಿಯ ತೋಳನಕೆರೆಗೆ ಪಾಲಿಕೆಯ ಮೇಯರ್ ರಾಮಣ್ಣ ಬಡಿಗೇರ ಅವರೊಂದಿಗೆ ಆಯಕ್ತರಾದ ಡಾ ಈಶ್ವರ ಉಳ್ಳಾಗಡ್ಡಿ ಯವರು ಭೇಟಿ ನೀಡಿ ಪರಿಶೀಲನೆ ಮಾಡಿದರು.ಹೌದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ತೋಳನ ಕರೆಗೆ ಮಹಾನಗರ ಪಾಲಿಕೆ ಮಹಾಪೌರರಾದ ರಾಮಪ್ಪ ಬಡಿಗೇರ್, ಮಹಾ ನಗರ ಪಾಲಿಕೆ ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿ ಯವರು ಭೇಟಿ ನೀಡಿ ಸ್ವಚ್ಛತೆ ಯನ್ನು ಪರಿಶೀಲಿಸಿದರು

ಕೆರೆಯಲ್ಲಿ ತುಂಬಿರುವ ಅಂತರ ಗಂಗೆವನ್ನು ತಕ್ಷಣ ತೆಗೆದು ಸ್ವಚ್ಛತೆಯನ್ನು ಕಾಪಾಡುವಂತೆ ಸ್ಥಳದಲ್ಲಿ ಹಾಜರಿದ್ದ ಹುಬ್ಬಳ್ಳಿಯ ಮಹಾನಗರ ಪಾಲಿಕೆ ವಲಯ ಸಹಾಯಕ ಆಯುಕ್ತರಾದ ಚಂದ್ರಶೇಖರ್ ಮಾಲಿ ಪಾಟೀಲ್ ಹಾಗೂ ಕಾರ್ಯನಿರ್ವಾಹಕ ಅಭಿಯಂತರ ರಾದ ವಿಠಲ್ ತುಬಾಕೆ ಅವರಿಗೆ ತಿಳಿಸಿದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.