22 ಅಧಿಕಾರಿಗಳಿಗೆ ಹಿಂಬಡ್ತಿ ನೀಡಿದ ಶಿಕ್ಷಣ ಇಲಾಖೆ – ಮುಂಬಡ್ತಿ ತಡೆಹಿಡಿದ ಬೆನ್ನಲ್ಲೇ ಹೊರಬಿದ್ದಿತು ಆದೇಶ ಅಧಿಕಾರಿಗಳಿಗೆ ಶಾಕ್ ನೀಡಿದ ಇಲಾಖೆ…..

Suddi Sante Desk
22 ಅಧಿಕಾರಿಗಳಿಗೆ ಹಿಂಬಡ್ತಿ ನೀಡಿದ ಶಿಕ್ಷಣ ಇಲಾಖೆ – ಮುಂಬಡ್ತಿ ತಡೆಹಿಡಿದ ಬೆನ್ನಲ್ಲೇ ಹೊರಬಿದ್ದಿತು ಆದೇಶ ಅಧಿಕಾರಿಗಳಿಗೆ ಶಾಕ್ ನೀಡಿದ ಇಲಾಖೆ…..

ಬೆಂಗಳೂರು

22 ಅಧಿಕಾರಿಗಳಿಗೆ ಹಿಂಬಡ್ತಿ ನೀಡಿದ ಶಿಕ್ಷಣ ಇಲಾಖೆ – ಮುಂಬಡ್ತಿ ತಡೆಹಿಡಿದ ಬೆನ್ನಲ್ಲೇ ಹೊರಬಿದ್ದಿತು ಆದೇಶ ಅಧಿಕಾರಿಗಳಿಗೆ ಶಾಕ್ ನೀಡಿದ ಇಲಾಖೆ.ಹೌದು ಶಿಕ್ಷಣ ಇಲಾಖೆಯ ವಿವಿಧ ಹಂತದ 22 ಅಧಿಕಾರಿಗಳಿಗೆ ಇಲಾಖೆ ಶಾಕ್ ನೀಡಿದೆ.ಹೌದು ಕ್ಷೇತ್ರ ಶಿಕ್ಷಣಾಧಿಕಾರಿ ಗಳು,ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಹಿರಿಯ ಉಪನ್ಯಾಸಕರು ಸೇರಿ ಒಟ್ಟು 22 ಅಧಿಕಾರಿಗಳಿಗೆ ಹಿಂಬಡ್ತಿಯನ್ನು ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.

ಕರ್ನಾಟಕ ಶಿಕ್ಷಣ ಸೇವೆಯ (ಕೆಇಎಸ್‌) ಪರೀಕ್ಷೆ ಬರೆದು ಗ್ರೂಪ್‌ ‘ಬಿ’ ಹುದ್ದೆಗಳಿಗೆ ಆಯ್ಕೆಯಾಗಿದ್ದ ಪ್ರೌಢಶಾಲಾ ಶಿಕ್ಷಕರು, ಡಯಟ್‌ ಉಪನ್ಯಾಸಕರು ಹಾಗೂ ತತ್ಸಮಾನ ಹುದ್ದೆಗಳಲ್ಲಿ ಕಾರ್ಯನಿರ್ವ ಹಿಸುತ್ತಿದ್ದ ಅಧಿಕಾರಿಗಳು ನಿಯಮಾನುಸಾರ ಗ್ರೂಪ್‌ ‘ಎ’ ಕಿರಿಯ ಶ್ರೇಣಿಗೆ ಬಡ್ತಿ ಹೊಂದಿದ್ದರು. ಅಂತಹ 22 ಅಧಿಕಾರಿಗಳಿಗೆ ನೀಡಿದ್ದ ಬಡ್ತಿಯನ್ನು ಇಲಾಖಾ ಮುಂಬಡ್ತಿ ಸಮಿತಿ ತಡೆ ಹಿಡಿದ ಬೆನ್ನಲ್ಲೇ ಶಿಕ್ಷಣ ಇಲಾಖೆಯ ಆದೇಶ ಹೊರಬಿ ದ್ದಿದೆ

ಹಿಂಬಡ್ತಿಗೆ ಒಳಗಾದ ಎಲ್ಲರೂ ಪ್ರಸ್ತುತ ಇರುವ ಹುದ್ದೆಗಳ ಕರ್ತವ್ಯದಿಂದ ಬಿಡುಗಡೆಗೊಂಡು ಆಯುಕ್ತರ ಕಚೇರಿಗೆ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.ಅವರ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಸಿಬಿ, ಲೋಕಾಯುಕ್ತ ದಾಳಿಗೆ ಒಳಗಾಗಿ ವಿಚಾರಣೆ ಎದುರಿಸುತ್ತಿದ್ದಾರೆ ಹಣಕಾಸು ದುರುಪಯೋಗ ಸೇರಿದಂತೆ ವಿವಿಧ ಕಾರಣಗಳಿಗಾಗಿ ಇಲಾಖಾ ವಿಚಾರಣೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದ್ದು ಹೀಗಾಗಿ ಈ ಒಂದು ಕ್ರಮವನ್ನು ಇಲಾಖೆ ಕೈಗೊಂಡು ಆದೇಶವನ್ನು ಹೊರಡಿಸಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.