ಪರಾರಿಯಾದ ಪ್ರಾಧ್ಯಾಪಕ ಏಕಾಏಕಿ ಎಸ್ಕೇಪ್ ಪೊಲೀಸರ ಹುಡುಕಾಟ…..

Suddi Sante Desk

ರಾಮನಗರ –

ಪ್ರಾಧ್ಯಾಪಕನೊಬ್ಬ ತನ್ನ ವಿದ್ಯಾರ್ಥಿನಿ ಮೊಬೈಲ್ ಗೆ ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕ ಅಶ್ಲೀಲ ಸಂದೇಶ ಕಳುಹಿಸುತ್ತಿದ ಆರೋಪದ ಮೇಲೆ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾನೆ.ಹೌದು ರಾಮನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಚ್.ಆರ್. ರಾಮಕೃಷ್ಣ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಕಳುಹಿಸಿದವರಾಗಿದ್ದು ಅವರ ವಿರುದ್ಧ ಈಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

ರಾಮಕೃಷ್ಣ ರಾತ್ರಿ ಸಮಯದಲ್ಲಿ ಈ ಅಶ್ಲೀಲ ಸಂದೇಶಗ ಳನ್ನು ಕಳುಹಿಸುತ್ತಿದ್ದು ರೋಸಿ ಹೋದ ವಿದ್ಯಾರ್ಥಿನಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾಳೆ.ಹೀಗಾಗಿ ವಿಚಾರಿಸಲು ಪೋಷಕರು ಕಾಲೇಜಿಗೆ ಬರುತ್ತಿದ್ದಂತೆ ಪ್ರಾಧ್ಯಾಪಕ ಪರಾರಿ ಯಾಗಿದ್ದಾನೆ.ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಠಾಣೆ ಪೋಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಆಘಾತಕಾರಿ ಸಂಗತಿ ಎಂದರೆ ಇದೇ ಪ್ರಾಧ್ಯಾಪಕ ಈ ಹಿಂದೆ ಸಹ ಮತ್ತೊಬ್ಬ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಕಳುಹಿ ಸಿದ್ದ ಈ ಕಾರಣಕ್ಕಾಗಿಯೇ ಆ ವಿದ್ಯಾರ್ಥಿನಿ ಕಾಲೇಜನ್ನೇ ತೊರೆದಿದ್ದಳು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.