ಶಾಲೆಗಳಿಗೆ ಬೇಸಿಗೆ ರಜೆ ಇದ್ದರೂ ಎಪ್ರಿಲ್ 14 ರಂದು ಶಾಲೆಗಳಲ್ಲಿ ಈ ಕಾರ್ಯಕ್ರಮ ಮಾಡುವಂತೆ ಸೂಚನೆ – ತಪ್ಪದೇ ಈ ಕಾರ್ಯ ಕ್ರಮ ಮಾಡಿ ಮಾಹಿತಿಯನ್ನು ಇಲಾಖೆಗೆ ಕಳಿಸುವಂತೆ ಆಯುಕ್ತರ ಕಟ್ಟಪ್ಪಣೆ…..

Suddi Sante Desk

ಬೆಂಗಳೂರು –

ಇಂದು 2021 – 22 ನೇ ಶೈಕ್ಷಣಿಕ ವರ್ಷದ ಇಂದು ಮುಕ್ತಾ ಯವಾಗಲಿದೆ.ಅಲ್ಲದೇ ಬೇಸಿಗೆ ರಜೆ ಕೂಡ ಶಾಲೆಗಳಿಗೆ ಇರಲಿದೆ. ಈ ನಡುವೆ ದಿನಾಂಕ 14-04-2022 ರಂದು ಬರುವಂತ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಪ್ರತಿ ವರ್ಷದಂತೆ ತಪ್ಪದೇ ಶಾಲೆಗಳಲ್ಲಿ ಆಚರಿಸುವಂತೆ ಶಿಕ್ಷಣ ಇಲಾಖೆ ಆದೇಶವನ್ನು ಮಾಡಿದೆ

ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ವನ್ನು ಹೊರಡಿಸಿದ್ದು ರಾಜ್ಯದಲ್ಲಿ 2021-22ನೇ ಶೈಕ್ಷಣಿಕ ವರ್ಷ ದಿನಾಂಕ 09-04-2022 ರಂದು ಮುಕ್ತಾ ಯವಾಗುತ್ತದೆ ಈಗಾಗಲೇ ದಿನಾಂಕ 14-04-2022ರಂದು ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಜಯಂತಿ ಯನ್ನು ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗ ಳಲ್ಲಿ ಆಚರಿಸುವಂತೆ ತಿಳಿಸಲಾಗಿದೆ.ದಿನಾಂಕ 14-04 2022 ರಂದು ತಪ್ಪದೇ ರಾಜ್ಯದ ಎಲ್ಲಾ ಸರ್ಕಾರಿ,ಅನು ದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು ಸಹ ಶಿಕ್ಷಕರು,ಎಸ್ ಡಿ ಎಂಸಿ ಅಧ್ಯಕ್ಷರು,ಸದಸ್ಯರು ಹಾಗೂ ವಿದ್ಯಾರ್ಥಿಗಳ ಸಹಭಾಗಿ ತ್ವದಲ್ಲಿ ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕೊಂಡು ಪ್ರತಿ ವರ್ಷದಂತೆ ಆಚರಿಸಲು ಸೂಚಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.