ನಾಡಹಬ್ಬ ಉದ್ಘಾಟಕರಾಗಿ ಮಾಜಿ ಮುಖ್ಯಮಂತ್ರಿ ಎಸ್ ಎಮ್ ಕೃಷ್ಣಾ ಗೊಂದಲಕ್ಕೆ ಬಿತ್ತು ತೆರೆ…..

Suddi Sante Desk

ಮೈಸೂರು –

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021 ರ ಉದ್ಘಾಟಕರಾಗಿ ಮಾಜಿ ಮುಖ್ಯಮಂತ್ರಿ ಎಸ್ ಎಮ್ ಕೃಷ್ಣಾ ಅವರನ್ನು ರಾಜ್ಯ ಸರ್ಕಾರ ಅಂತಿಮ ಮಾಡಿದೆ.ಇದರೊಂದಿಗೆ ದಸರಾ ಉದ್ಘಾ ಟಕರ ಗೊಂದಲಕ್ಕೆ ತೆರೆಯನ್ನು ಏಳೆಯಲಾಗಿದೆ.

ದಸರಾ ಉದ್ಘಾಟಕರಾಗಿ ಮಾಜಿ ಸಿಎಂ ಎಸ್.ಎಂ ಕೃಷ್ಣ ಹೆಸರು ಅಂತಿಮ ಮಾಡಲಾಗಿದೆ. ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಈ ಕುರಿತಂತೆ ಮಾಹಿತಿಯನ್ನು ನೀಡಿದ್ದಾರೆ. ಅಕ್ಟೋಬರ್ 7ರಂದು ಮೈಸೂರು ದಸರಾ ಮಹೋತ್ಸವ ನಡೆಯಲಿದ್ದು ಇದರ ಉದ್ಘಾಟನೆಯನ್ನು ಮಾಡಲಿದ್ದಾರೆ.

ನಾಡದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಸ್.ಎಂ.ಕೃಷ್ಣ ಇನ್ನೂ ಇದೇ ಮೊದಲ ಬಾರಿಗೆ ರಾಜಕೀಯ ಕ್ಷೇತ್ರಕ್ಕೆ ಒಲಿದಿದೆ ಉದ್ಘಾಟನಾ ಭಾಗ್ಯ.1999ರಿಂದ 2004ರ ವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು ಇವರು.

ಇನ್ನೂ ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ತಾಲೂ ಕಿನ ಸೋಮನಹಳ್ಳಿ ಗ್ರಾಮದವರಾಗಿದ್ದು ಕೇಂದ್ರ ಸಚಿವರು, ವಿಧಾನ ಸಭಾ ಸ್ಪೀಕರ್,ರಾಜ್ಯಪಾಲ, ರಾಜ್ಯಸಭಾಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ ಎಸ್ ಎಂ ಕೆ.ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮಾಡಿರುವ ಇವರಿಗೆ ಈಗ ಈ ವರುಷದ ದಸರಾ ಹಬ್ಬದ ಉದ್ಘಾಟನೆಯ ಭಾಗ್ಯ ಸಿಕ್ಕಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.