This is the title of the web page
This is the title of the web page

Live Stream

[ytplayer id=’1198′]

September 2025
T F S S M T W
 123
45678910
11121314151617
18192021222324
252627282930  

| Latest Version 8.0.1 |

National News

ರಾಹುಲ್ ಗಾಂಧಿ ಯೊಂದಿಗೆ ಭಾರತ್ ಜೋಡೋ ದಲ್ಲಿ ಹೆಜ್ಜೆ ಹಾಕಿದ ಮಾಜಿ ಸಚಿವ ಸಂತೋಷ್ ಲಾಡ್ ಬಳ್ಳಾರಿ ತಲುಪಿದ ಭಾರತ್ ಜೋಡೋ ಯಾತ್ರೆ ಸಂತೋಷ್ ಲಾಡ್ ಉಸ್ತುವಾರಿ ಯಲ್ಲಿ ನಡೆಯಲಿದೆ ಬೃಹತ್ ಸಮಾವೇಶ

ರಾಹುಲ್ ಗಾಂಧಿ ಯೊಂದಿಗೆ ಭಾರತ್ ಜೋಡೋ ದಲ್ಲಿ ಹೆಜ್ಜೆ ಹಾಕಿದ ಮಾಜಿ ಸಚಿವ ಸಂತೋಷ್ ಲಾಡ್ ಬಳ್ಳಾರಿ ತಲುಪಿದ ಭಾರತ್ ಜೋಡೋ ಯಾತ್ರೆ ಸಂತೋಷ್ ಲಾಡ್ ಉಸ್ತುವಾರಿ ಯಲ್ಲಿ ನಡೆಯಲಿದೆ ಬೃಹತ್ ಸಮಾವೇಶ
WhatsApp Group Join Now
Telegram Group Join Now

ಬಳ್ಳಾರಿ

 

ಭಾರತ್ ಜೋಡೋ ಯಾತ್ರೆ ರಾಜ್ಯದ ರಾಜಕೀಯ ಕೇಂದ್ರೀಕೃತ ಪ್ರದೇಶ ಬಳ್ಳಾರಿಗೆ ತಲುಪಿದ್ದು ಇಂದು ನಗರದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ 3700 ಕಿಲೋ ಮೀಟರ್ ಯಾತ್ರೆ ಈವರೆಗೂ ಒಟ್ಟು 1022 ಕಿಲೋ ಮೀಟರ್ ಕ್ರಮಿಸಿದೆ.ಇದರಲ್ಲಿ ರಾಹುಲ್ ಗಾಂಧಿ ಮತ್ತು ತಂಡ 679 ಕಿಲೋ ಮೀಟರ್ ಹೆಜ್ಜೆ ಹಾಕಿದ್ದಾರೆ.

 

ಹದಿಮೂರನೇ ದಿನಕ್ಕೆ ಕಾಲಿಟ್ಟ ಪಾದಯಾತ್ರೆ ರಾಂಪುರದಿಂದ ಆರಂಭವಾಯಿತು ಮೊದಲ ಹಂತ ಆಂಧ್ರ ಪ್ರದೇಶದ ಜಾಜಿರಕಲ್ಲುವರೆಗೂ 13 ಕಿಲೋ ಮೀಟರ್ ನಡೆದಿದೆ. ಸಂಜೆ 6.5 ಕಿಲೋ ಮೀಟರ್ ನಡೆದು ಒಟ್ಟು ದಿನದ ಯಾತ್ರೆ 19 ಕಿಲೋ ಮೀಟರ್ಗಳಷ್ಟಾಗಲಿದೆ. ಸಂಜೆ ಹಲಕುಂಡಿ ಮಠದ ಬಳಿ ವಿಶ್ರಾಂತಿ ಪಡೆದಿದೆ

 

ರಾಷ್ಟ್ರೀಯ ನಾಯಕರಾದ ದಿಗ್ವಿಜಯಸಿಂಗ್, ಕೆ.ಸಿವೇಣಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾ ಮಯ್ಯ, ಬಿ.ಕೆ.ಹರಿಪ್ರಸಾದ್ ಸೇರಿ ಮಾಜಿ ಸಚಿವ ಸಂತೋಷ್ ಲಾಡ್ ಕ್ಷೇತ್ರದ ಸಾವಿರಾರು ಜನರೊಂದಿಗೆ ಪಾಲ್ಗೊಂಡು ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದರು

 

ಆರಂಭದಲ್ಲಿ ಬಳ್ಳಾರಿಯ ಹೆದ್ದಾರಿಯಲ್ಲಿ ಪಾದಯಾತ್ರೆ ಸಾಗುವಾಗ ದಾರಿಯುದ್ಧಕ್ಕೂ ಸಾಲುಗಟ್ಟಿ ನಿಂತಿದ್ದ ಜನ ರಾಹುಲ್ ಗಾಂಧಿ ಯವರನ್ನು ಕಂಡು ಪುಳಕಿತರಾದರು ಅಲ್ಲಲ್ಲಿ ಅದ್ಧೂರಿ ಸ್ವಾಗತ ಕೋರಲಾಗಿತ್ತು. ಮೊಳ ಕಾಲ್ಮೂರು ಕ್ಷೇತ್ರದಲ್ಲಿ ಒಳಜಗಳ ಮರೆತು ನಾಯಕರು ಒಟ್ಟಾಗಿ ಹೆಜ್ಜೆ ಹಾಕಿದರು. ಹನುಮವೇಶಧಾರಿಗಳು ಯಾತ್ರೆಯಲ್ಲಿ ಕಾಣಿಸಿಕೊಂಡರು. ಅಥ್ಲೆಟಿಕ್ ಒಬ್ಬಳು ಯಾತ್ರೆಯ ಮುಂದೆ ತನ್ನ ಕೌಶಲ್ಯ ಪ್ರದರ್ಶನ ಮಾಡಿದರು.

 

https://youtu.be/25Cs_jBJf6Yhttp

 

ರಾಜ್ಯದ ಗಡಿಯ ಭಾಗವಾಗಿರುವ ಮೊಳಕಾಲ್ಮೂ ರಿನ ಕಣಕುಪ್ಪೆ ಗ್ರಾಮದ ಮೂಲಕ ನೆರೆಯ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿನ ಹಿರೇಹಾಳ್ ಸೇರಿ ಹಲವು ಗ್ರಾಮಗ ಳಲ್ಲಿ ನಡೆದಿದೆ.

 

 

ಆಂಧ್ರ ಪ್ರದೇಶದ ಒಬಳಪುದಲ್ಲಿ ರಾಹುಲ್ ಗಾಂಧಿಗಾಗಿ ವೇದಿಕೆ ಸಿದ್ಧಗೊಳಿಸಿ ಸಣ್ಣ ಕಾರ್ಯಕ್ರಮದಲ್ಲಿ ಮೇಕೆ ಮರಿಗಳನ್ನು ಉಡುಗೊರೆ ನೀಡಲು ಜನ ಕಾಯುತ್ತಿದ್ದರು. ಆದರೆ ರಾಹುಲ್ ಗಾಂಧಿ ವೇದಿಕೆ ಹತ್ತದೆ ಪಾದಯಾತ್ರೆ ಮುಂದುವರೆಸಿದರು. ಮೇಕೆ ಮರಿ ನೀಡಲು ನಿಂತಿದ್ದವರಿಗೆ ನಿರಶೆಯಾಯಿತು. ಬಿಸಿಲಿನ ತಾಪ ಯಾತ್ರಿಗಳನ್ನು ಹೈರಾಣು ಮಾಡಿತ್ತು ಭರ್ಜರಿ ಕಲ್ಲಿನ ಟೋಲ್ ಬಳಿ ರಾಹುಲ್ ಗಾಂಧಿ ಯಾತ್ರೆ ಅಂತ್ಯಗೊಂಡಿತ್ತು. ಅಲ್ಲಿಂದ ರಾಹುಲ್ ವಿಶ್ರಾಂತಿಗಾಗಿ ತೆರಳಿದರು.ಇಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ.ಮಾಜಿ ಸಚಿವ ಸಂತೋಷ್ ಲಾಡ್ ಉಸ್ತುವಾರಿ ಯಲ್ಲಿ ಈ ಒಂದು ಸಮಾವೇಶ ನಡೆಯಲಿದ್ದು ರಾಜಸ್ಥಾನ ಮತ್ತು ಛತ್ತೀಸ್ ಘಡ್ ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ.

 


Google News

 

 

WhatsApp Group Join Now
Telegram Group Join Now
Suddi Sante Desk