ಅನುಭವಿ ಶಿಕ್ಷಕರಿಗೆ ಅನ್ಯಾಯ ಹೇಳೊರಿಲ್ಲ ಕೇಳೊರಿಲ್ಲ…. ಮತ್ತೊಂದು ಆಂತಕದಲ್ಲಿ ನಾಡಿನ ಶಿಕ್ಷಕರು…..

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ಸಧ್ಯ 6 ರಿಂದ 8ನೇ ತರಗತಿಗಳಿಗೆ ಹೊಸದಾಗಿ 15 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದು ಈಗಾಗಲೇ ಈ ಕುರಿತಂತೆ ಅರ್ಜಿ ಸಲ್ಲಿಕೆ ಕೂಡಾ ಆರಂಭ ವಾಗಿದ್ದು ಇದೆಲ್ಲದರ ನಡುವೆ ಈ ಒಂದು ನೇಮಕಾತಿಯಿಂ ದಾಗಿ ಈಗಾಗಲೇ ಕಳೆದ ಹಲವಾರು ವರ್ಷಗಳಿಂದ ಶಿಕ್ಷಕ ರಾಗಿ ಸೇವೆಯನ್ನು ಸಲ್ಲಿಸಿದ ಸಲ್ಲಿಸುತ್ತಿರುವ ಪದವೀಧದರ ಶಿಕ್ಷಕರುಗಳಿಗೆ ಇದರಿಂದಾಗಿ ತುಂಬಾ ಅನ್ಯಾಯವಾಗುತ್ತಿದೆ ಈಗಾಗಲೇ ನಮಗೂ ಕೂಡಾ ಭಡ್ತಿ ಸಿಗುತ್ತದೆ ಎಂದು ಕೊಂಡು ಕಾಯುತ್ತಿದ್ದ ಶಿಕ್ಷಕರಿಗೆ ಈ ಒಂದು ನೇಮಕಾತಿಯ ಪ್ರಕ್ರಿಯಿಂದಾಗಿ ದೊಡ್ಡದೊಂದು ಆತಂಕ ಎದುರಾಗಿದ್ದು ಈಗಾಗಲೇ ಒಂದು ಕಡೆಗೆ ಸರಿಯಾಗಿ ವರ್ಗಾವಣೆ ಮತ್ತೊಂದು ಕಡೆಗೆ ಹತ್ತು ಹಲವಾರು ಸಮಸ್ಯೆಗಳು ಹೀಗಾಗಿ ಇವೆಲ್ಲದರ ನಡುವೆ ಸಧ್ಯ ನಾಡಿನ ಶಿಕ್ಷಕ ಬಂಧುಗ ಳಿಗೆ.ಮತ್ತೊಂದು ಆತಂಕ ಶುರುವಾಗಿದ್ದು ಎದುರಾಗಿದೆ.

2017 ರಿಂದ GPT ಶಿಕ್ಷಕರ ನೇಮಕಾತಿಗೆ ಪರೀಕ್ಷೆ ಮಾನ ದಂಡ ಇಟ್ಟು ಆಯ್ಕೆ ಪ್ರಕ್ರಿಯೆ ನಡೆಸುತ್ತೀದಗದೀರಿ ಆದರೆ ಆಯ್ಕೆ ಕಡಿಮೆ ಆಗುತ್ತಿದ್ದಾರೆ.ನಮ್ಮನ್ನು PST ಅಂತ ಹಿಂಬಡ್ತಿ ಮಾಡಿ 2017 ರಿಂದಲೂ 6,7,8 ಕ್ಕೆ ಪಾಠ ಮಾಡಿ ಸುತ್ತಿರುವುದು ಕಾನೂನು ಪ್ರಕಾರ ಅಪರಾಧ ಅಲ್ವೆ. ಹಾಗಾ ದರೆ ನಮ್ಮ ಈ ಹೆಚ್ಚುವರಿ ಸೇವೆಗೆ ಪರಿಹಾರ ಕೊಡಿ.ಈ ರೀತಿಯಲ್ಲಿ ಕಾನೂನು ಬಾಹಿರವಾಗಿ ದುಡಿಸಿಕೊಂಡ ಅಧಿಕಾರಿಗಳಿಗೆ ಕೋರ್ಟ್ ನಿಂದ ಅನರ್ಹರಿಂದ ಪಾಠ ಮಾಡಿಸಿದ್ದಾರೆ ಅಂತ ಶಿಕ್ಷೆ ಕೊಡಿಸಬಹುದಲ್ಲ ಈ ಸಣ್ಣ ವಿಚಾರವು ಕೂಡಾ ಕೋರ್ಟ್ ಗೆ ಕೂಡ ಹೊಳೆಯತ್ತಿಲ್ಲವೆ ಸರ್ಕಾರ ಮಾಡಿದ್ದು ಸರಿ ಅಂತ ತೀರ್ಪುಕೊಟ್ಟ (KAT) ಕೋರ್ಟ್ ಗೆ ಅನರ್ಹರಿಂದ ಪಾಠ ಮಾಡಿಸುತ್ತಿರುವುದು ಸರಿಯಾಗಿ ಕಾಣುತ್ತಿದೆಯಾ ಎಂಬ ಪ್ರಶ್ನೆಯನ್ನು ಅನ್ಯಾಯ ಕ್ಕೊಳಗಾಗಿರುವ ಶಿಕ್ಷಕರು ಕೇಳುತ್ತಿದ್ದು ಇವರ ಈ ಪ್ರಶ್ನೆಗ ಳಿಗೆ ಯಾರು ಉತ್ತರಿಸೊರಿಲ್ಲ ಶಿಕ್ಷಕರ ಸಂಘಟನೆಗಳ ನಾಯಕರು ಸರ್ಕಾರಿ ನೌಕರರ ನಾಯಕರು ಇಷ್ಟೇಲ್ಲಾ ಆಗುತ್ತಿದ್ದರೂ ಕೂಡಾ ಯಾಕೇ ಮೌನವಾಗಿದ್ದಾರೋ ಎಂಬ ಅನುಮಾನ ಕಾಡುತ್ತಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.