This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

State News

ಶಾಲೆಯ ಮುಖ್ಯ ಗುರುಗಳಿಂದ ಬಯಲಾಯಿತು ಸ್ಫೋಟಕ ಮಾಹಿತಿ – ಸಮಾಜದಲ್ಲಿ ಇಂತವ ರಿಂದಲೇ ಶಿಕ್ಷಕರ ಗೌರವ ಹಾಳು

WhatsApp Group Join Now
Telegram Group Join Now

ಕೊಪ್ಪಳ –

ಶಾಲಾ ಮಕ್ಕಳೊಂದಿಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ ಶಿಕ್ಷಕನನ್ನು ರಾಯಚೂರು ಡಿಡಿಪಿಐ ಈಗಾಗಲೇ ಅಮಾ ನತು ಮಾಡಿ ಆದೇಶ ಹೊರಡಿಸಿದ್ದಾರೆ.ಮಹಮ್ಮದ್ ಅಜರುದ್ದೀನ್ ಅಮಾನತುಗೊಂಡಿರುವ ಶಿಕ್ಷಕರಾಗಿದ್ದು ಇನ್ನೂ ಮಹಮ್ಮದ್ ಅಜರುದ್ಧೀನ್ ಸಿಂಧನೂರು ತಾಲೂ ಕಿನ ಸಿಂಗಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕನಾಗಿ ಕೆಲಸ ಮಾಡಿಕೊಂಡು ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಹಮ್ಮದ್ ಅಜರು ದ್ಧೀನ್ ಕೆಲಸ ಮಾಡುತ್ತಿದ್ದ ಶಾಲೆಯ ಮುಖ್ಯ ಗುರುಗಳಾದ ಶರಣಪ್ಪ ಮಾತನಾಡಿ ಶಿಕ್ಷಕ‌ ಅಜರುದ್ದೀನ್ ಹಿಂದೆ ಮುಸ್ಲಿಂ ಸಮುದಾಯ ಆತನ ಜೊತೆಯಲ್ಲಿದೆ.ಅಜರುದ್ದೀನ್ ಅಮಾ ನತು ಎಂದಾಕ್ಷಣ ಶಾಲೆಗೆ ಬಂದು ಮುಸ್ಲಿಂ ಯುವಕರು ಮುತ್ತಿಗೆ ಹಾಕಿದ್ದರು.ಗ್ರಾಮದಲ್ಲಿ ಸುಮಾರು ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದಾನೆ ಎಂಬ ಮಾಹಿತಿಯನ್ನು ಶಿಕ್ಷಕ ಶರಣಪ್ಪ ಹೇಳುತ್ತಾರೆ.

ಶಾಲೆಗೆ ಬರುವ ವಿದ್ಯಾರ್ಥಿಗಳ ತಾಯಂದಿರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.ಸಮಾಜದಲ್ಲಿ ಶಿಕ್ಷಕರಿಗೆ ವಿಶೇಷ ಗೌರವ ನೀಡಲಾಗುತ್ತದೆ.ಅದರಲ್ಲಿಯೂ ತಮ್ಮ ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕರನ್ನು ಪೋಷಕರು ಅತ್ಯಂತ ಗೌರವದಿಂದ ಕಾಣುತ್ತಾರೆ.ಕೊರೊನಾ ಬಂದ ಬಳಿಕ ಶಾಲೆ ಗಳಲ್ಲಿ ಆನ್ ಲೈನ್ ಪಾಠಗಳು ಆರಂಭಗೊಂಡಿವೆ.ಇನ್ನೂ ಶಿಕ್ಷಕರು ಮಕ್ಕಳನ್ನು ಸಂಪರ್ಕಿಸಲು ಪೋಷಕರ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಾರೆ.

ಶಾಲೆಗಳು ಎಲ್ಲ ಮಕ್ಕಳ ಪೋಷಕರ ನಂಬರ್ ಪಡೆದು ವಾಟ್ಸಪ್ ಗ್ರೂಪ್ ರಚನೆ ಮಾಡಿ,ಪಾಠ,ಹೋಮ್ ವರ್ಕ್ ಸೇರಿದಂತೆ ಇತ್ಯಾದಿ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಆದ್ರೆ ಇದನ್ನೇ ದುರುಪಯೋಗ ಮಾಡಿಕೊಂಡ ಶಿಕ್ಷಕ ನೋರ್ವ ವಿದ್ಯಾರ್ಥಿಗಳ ತಾಯಂದಿರಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಅಮಾನತುಗೊಂಡಿದ್ದಾನೆ.


Google News

 

 

WhatsApp Group Join Now
Telegram Group Join Now
Suddi Sante Desk