ರೈತ ಆತ್ಮಹತ್ಯೆ ಅಕಾಲಿಕ ಮಳೆಯಿಂದ ಕಂಗಾಲಾಗಿದ್ದ ರೈತ ಸಾವಿಗೆ ಶರಣು…..

Suddi Sante Desk

ರಾಯಚೂರು –

ಬೆಳೆ ಹಾನಿಯಿಂದ ಕಂಗಾಲಾಗಿದ್ದ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ‌.10 ದಿನಗಳ ಕಾಲ ಅಕಾಲಿಕ ‌ಮಳೆ ಹಿನ್ನೆಲೆಯಲ್ಲಿ ಕಟಾವಿಗೆ ಬಂದ ಐದು ಎಕರೆ ಭತ್ತ ನೆಲಸಮವಾಗಿದೆ ಇದರಿಂದಾಗಿ ಕಂಗಾಲಾಗಿದ್ದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ

3-4 ಲಕ್ಷ ಸಾಲ ಮಾಡಿ ಬೆಳೆದಿದ್ದ ಭತ್ತ ಮಳೆಯಿಂದಾಗಿ ಹಾಳಾಗಿದೆ‌.ಭತ್ತ ನೆಲಕಚ್ಚಿದನ್ನ ನೋಡಿದ ರೈತ ರಂಗಣ್ಣ (30) ಮನನೊಂದು ಆತ್ಮಹತ್ಯೆಗೆ ಶರಣಾದರು.ರಾಯ ಚೂರು ಜಿಲ್ಲೆ ಸಿಂಧನೂರು ತಾ. ರೌಂಡಗುಂದಾ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಮನೆಯಲ್ಲಿಯೇ ವಿಷಸೇವಿಸಿ ಪ್ರಾಣಬಿಟ್ಟಿದ್ದಾನೆ ರೈತ ರಂಗಣ್ಣ.ಮನೆಗೆ ಆಧಾರವಾಗಿದ್ದ ರೈತ ರಂಗಣ್ಣನ ಸಾವಿನಿಂದ ಮುಗಿಲು ಮುಟ್ಟಿದ ಆಕ್ರಂ ದನ.ಕಳೆದ ವಾರ ಲಿಂಗಸುಗೂರು ತಾಲೂಕಿನ ಇಬ್ಬರು ರೈತರು ಸಾವಿಗೆ ಶರಣಾಗಿದ್ದರು.ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.