ಗಣೇಶ ಹಬ್ಬಕ್ಕೆ ಸ್ಕೂಟಿ ಯಲ್ಲಿ ಹೊರಟಿದ್ದವರಿಗೆ ಕಾರು ಡಿಕ್ಕಿ ತಂದೆ ಸಾವು ಮಗಳಿಗೆ ತೀವ್ರ ಗಾಯ – ಹಬ್ಬಕ್ಕೆ ಹೊರಟಿದ್ದ ತಂದೆ ಮಗಳು‌…..

Suddi Sante Desk
ಗಣೇಶ ಹಬ್ಬಕ್ಕೆ ಸ್ಕೂಟಿ ಯಲ್ಲಿ ಹೊರಟಿದ್ದವರಿಗೆ ಕಾರು ಡಿಕ್ಕಿ ತಂದೆ ಸಾವು ಮಗಳಿಗೆ ತೀವ್ರ ಗಾಯ – ಹಬ್ಬಕ್ಕೆ ಹೊರಟಿದ್ದ ತಂದೆ ಮಗಳು‌…..

ಕಾರವಾರ

ಚತುರ್ಥಿಗೆಂದು ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಸ್ಕೂಟಿ ಚಲಾಯಿಸುತ್ತಿದ್ದ ವ್ಯಕ್ತಿ ಯೊರ್ವ ಸಾವಿಗೀಡಾಗಿ ಮಗಳಿಗೆ ಗಾಯ ಗೊಂಡ ಘಟನೆ ಕಾರವಾರ ದಲ್ಲಿ ನಡೆದಿದೆ ‌ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರ ಬಾಳೆಗುಳಿ ಬಳಿ ಈ ಒಂದು ಘಟನೆ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಕಾರವಾರದ ಗುರುಮಠ ನಿವಾಸಿ ಉದಯ ನಾಯ್ಕ(65) ಮೃತ ದುರ್ದೈವಿಯಾಗಿದ್ದಾರೆ. ಅನುಪಾ ನಾಯ್ಕ(33) ಗಾಯಗೊಂಡ ಪುತ್ರಿ ಯಾಗಿದ್ದಾರೆ.ಕಾರವಾರದಿಂದ ಗೋಕರ್ಣ ಕಡೆ ತೆರಳುತ್ತಿದ್ದ ಸ್ಕೂಟಿ.

ಸಂಬಂಧಿಕರ ಮನೆಗೆ ಗಣೇಶ ಹಬ್ಬಕ್ಕೆಂದು ಹೊರಟಿದ್ದರು.ಎದುರಿನಿಂದ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುದ್ದಿ ಸಂತೆ ನ್ಯೂಸ್ ಕಾರವಾರ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.