ಅನ್ನದ ಪಾತ್ರೆಗೆ ಬಿದ್ದು ಅಡುಗೆ ಸಹಾಯಕಿ ಸೇರಿ ಐವರು ಮಕ್ಕಳಿಗೆ ಗಾಯ – ಅನ್ನ ಬಸಿಯುವಾಗ ಅಡ್ಡ ಬಂದ ಮಕ್ಕಳು ಪಾತ್ರೆಯಲ್ಲಿ ಬಿದ್ದು ಎಡವಟ್ಟು…..

Suddi Sante Desk

ರಾಯಚೂರು –

ಅನ್ನವನ್ನು ಬಸಿಯುವಾಗ ಪಾತ್ರೆಗೆ ಬಿದ್ದ ಅಡುಗೆ ಸಹಾಯಕಿ ಸೇರಿದಂತೆ ಐವರು ಮಕ್ಕಳು ತೀವ್ರವಾಗಿ ಗಾಯಗೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಹೌದು ನಗರದ 13ನೇ ವಾರ್ಡ್ ನ ಮಂಗಳವಾರಪೇಟೆ ಅಂಗನವಾಡಿಯಲ್ಲಿ ಬಿಸಿ ಅನ್ನದ ಗಂಜಿ ಬಿದ್ದು ಐವರು ಮಕ್ಕಳು ಹಾಗೂ ಅಡುಗೆ ಸಹಾಯಕಿ ಗಾಯಗೊಂಡಿದ್ದಾರೆ ಹಿಬಾ (3 ವ), ಅರ್ಹಾನ್ (3 ವ), ಮಹ್ಮದ್ ಜಾಹಿದ್ (3 ವ), ಶೇಖ್ ಅದ್ನಾನ್ (4 ವ) ಹಾಗೂ ಬಿಬಿ ಮರಿಯಮ್ (3 ವ) ಗಾಯಗೊಂಡ ಮಕ್ಕಳಾಗಿದ್ದಾರೆ.

ಬೆಳಗ್ಗೆ ಅಂಗನವಾಡಿಯಲ್ಲಿ ಅನ್ನ ಮಾಡಿದ್ದ ಅಡುಗೆ ಸಹಾಯಕಿ ಲಕ್ಷ್ಮಿ ಗಂಜಿ ಬಸಿಯುವಾಗ ಮಕ್ಕಳು ಅಡ್ಡ ಬಂದ ಕಾರಣ ಈ ದುರ್ಘಟನೆ ಸಂಭವಿಸಿದೆ ಅಂಗನವಾಡಿ ಸ್ಥಳ ಚಿಕ್ಕದಾಗಿರುವ ಕಾರಣ ಅಡುಗೆ ಮಾಡುವ ಸ್ಥಳದ ಪಕ್ಕದಲ್ಲೇ ಮಕ್ಕಳು ಆಡುತ್ತಿದ್ದರು.ಗಂಜಿ ಸಾಕಷ್ಟು ಬಿಸಿ ಯಾಗಿದ್ದ ಕಾರಣ ಮಕ್ಕಳಿಗೆ ಹೆಚ್ಚಿನ ಪ್ರಮಾಣದ ಗಾಯಗ ಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹಾಯಕಿ ಲಕ್ಷ್ಮಿ ಕೈ ಮೇಲೆ ಗಂಜಿ ಬಿದ್ದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.