ಮಂಜುನಾಥ್ ಹೆಸರಿನ ಐವರು ಸುರೇಶ್ ಹೆಸರಿನ ಮೂವರಿಂದ ನಾಮಪತ್ರ ಸಲ್ಲಿಕೆ ರಂಗೇರಿದೆ ಲೋಕಸಭಾ ಕದನ ಕಣ ಗೊಂದಲದಲ್ಲಿ ಮತದಾರರು…..

Suddi Sante Desk
ಮಂಜುನಾಥ್ ಹೆಸರಿನ ಐವರು ಸುರೇಶ್ ಹೆಸರಿನ ಮೂವರಿಂದ ನಾಮಪತ್ರ ಸಲ್ಲಿಕೆ ರಂಗೇರಿದೆ ಲೋಕಸಭಾ ಕದನ ಕಣ ಗೊಂದಲದಲ್ಲಿ ಮತದಾರರು…..

ರಾಮನಗರ

ಮಂಜುನಾಥ್ ಹೆಸರಿನ ಐವರು ಸುರೇಶ್ ಹೆಸರಿನ ಮೂವರಿಂದ ನಾಮಪತ್ರ ಸಲ್ಲಿಕೆ ರಂಗೇರಿದೆ ಲೋಕಸಭಾ ಕದನ ಕಣ ಗೊಂದಲ ಹೌದು

ದಿನದಿಂದ ದಿನಕ್ಕೆ ರಂಗೇರುತ್ತಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಹೆಸರಿನ ಮೂವರು ಹಾಗೂ ಮಂಜುನಾಥ್ ಹೆಸರಿನ ಐವರು ಕಣದಲ್ಲಿದ್ದಾರೆ ಇನಿಷಿಯಲ್‌ ಮತ್ತು ಪದನಾಮದಲ್ಲಿ ಮಾತ್ರ ಅಲ್ಪಸ್ವಲ್ಪ ಬದಲಾವಣೆ ಇದ್ದು, ಉಳಿದಂತೆ ಹೆಸರು ಒಂದೇ ರೀತಿ ಇದೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಅದೇ ಹೆಸರಿನಲ್ಲಿ ಕರುನಾಡು ಪಾರ್ಟಿಯಿಂದ ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರಿನ ಸುರೇಶ್ ಎಸ್. ಹಾಗೂ ಪಕ್ಷೇತರರಾಗಿ ಕನಕಪುರ ತಾಲ್ಲೂಕಿನ ಮರಳೆ ಗ್ರಾಮದ ಸುರೇಶ್ ಎಂ.ಎನ್ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಾ. ಸಿ.ಎನ್. ಮಂಜುನಾಥ್ ಗುರುವಾರ ನಾಮಪತ್ರ ಸಲ್ಲಿಸಿದರೆ ಅದೇ ಹೆಸರಿನ ಇತರ ನಾಲ್ವರು ಉಮೇದುವಾರಿಕೆ ಸಲ್ಲಿಸಿರುವುದು ವಿಶೇಷವಾಗಿದೆ.

ಬಹುಜನ್ ಭಾರತ್ ಪಾರ್ಟಿಯಿಂದ ಮಂಜುನಾಥ ಸಿ.ಎನ್. ನಾಮಪತ್ರ ಸಲ್ಲಿಸಿದ್ದರು. ಪಕ್ಷೇತರರಾಗಿ ಮಂಜುನಾಥ್ ಸಿ., ಮಂಜುನಾಥ್ ಎನ್. ಹಾಗೂ ಮಂಜುನಾಥ್ ಕೆ. ಎಂಬುವರು ನಂತರ ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ

 

ಈ ಪೈಕಿ ಮಂಜುನಾಥ್ ಸಿ.ಎನ್ ಅವರು ಡಾ. ಮಂಜುನಾಥ್ ಅವರ ಸ್ವಂತ ಊರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನವರು. ಪಕ್ಷೇತರರಾದ ಮಂಜುನಾಥ್ ಸಿ. ಬೆಂಗಳೂರಿನ ಮೂಡಲಪಾಳ್ಯದವರಾದರೆ, ಮಂಜುನಾಥ್ ಎನ್. ರಾಜಾಜಿನಗರ ಹಾಗೂ ಮಂಜುನಾಥ್ ಕೆ. ಪಾಪರೆಡ್ಡಿಪಾಳ್ಯದವರು.

ಬಿಜೆಪಿಯ ಡಾ. ಮಂಜುನಾಥ್ ಮತ್ತು ಕಾಂಗ್ರೆಸ್‌ನ ಡಿ.ಕೆ. ಸುರೇಶ್ ಅವರ ಹೆಸರಿನ ಕುರಿತು ಮತದಾರರಲ್ಲಿ ಗೊಂದಲ ಮೂಡಿಸಿ, ಎದುರಾಳಿಗಳ ವಿರುದ್ಧ ಲಾಭ ಪಡೆಯುವುದ ಕ್ಕಾಗಿ ಒಂದೇ ರೀತಿಯ ಹೆಸರಿನವರನ್ನು ಕರೆ ತಂದು ನಾಮಪತ್ರ ಸಲ್ಲಿಸಲಾಗಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದು ಏನೇನಾಗಲಿದೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.