ACB ಬಲೆಗೆ ಬಿದ್ದ ಆಹಾರ ಸಂರಕ್ಷಣಾಧಿಕಾರಿ – ಎರಡು ಬೇಕರಿ ದಂಡ ಪಾವತಿ ತಪ್ಪಿಸಲು ಹಣಕ್ಕೆ ಬೇಡಿಕೆ…..

Suddi Sante Desk

ಚಿತ್ರದುರ್ಗ –

ಆಹಾರ ಗುಣಮಟ್ಟವನ್ನು ಬೇಕರಿಯಲ್ಲಿ ಕಾಪಾಡಿಲ್ಲವೆಂದು ದಂಡ ಹಾಕಿ ತಡವಾಗಿದಕ್ಕೆ ಮತ್ತಷ್ಟು ದಂಡ ವಿಧಿಸಿ ಅದನ್ನು ತಪ್ಪಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಆಹಾರ ಸಂರಕ್ಷಣಾಧಿಕಾರಿ ಎಸಿಬಿ ಬಲೆಗೆ ಬಿದ್ದ ಘಟನೆ ಚಿತ್ರದುರ್ಗ ದಲ್ಲಿ ನಡೆದಿದೆ.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಪ್ರಭಾರಿ ಆಹಾರ ಸಂರಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ್ ಎಸಿಬಿ ಬಲೆಗೆ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದಾರೆ.ಈ ಹಿಂದೆ ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯಲ್ಲಿರುವ ಎರಡು ಬೇಕರಿಗಳಿಗೆ ಭೇಟಿ ನೀಡಿ ಸರಿಯಾಗಿ ಗುಣಮಟ್ಟವನ್ನು ಕಾಪಾಡಿಲ್ಲವೆಂದು ನೋಟೀಸ್ ನೀಡಿದ್ದರು.ನಂತರ ಅದನ್ನು ಪಾವತಿಸಲು ತಡವಾಗಿದಕ್ಕೆ ಮತ್ತಷ್ಟು ದಂಡ ವಿಧಿಸಿದ್ದರು.ಇದನ್ನು ತಪ್ಪಿಸಲು ಹತ್ತು ಸಾವಿರ ರುಪಾಯಿ ಬೇಡಿಕೆ ಇಟ್ಟಿದ್ದರು ಈ ಕುರಿತು ಬೇಕರಿ ಮಾಲೀಕ ಮಂಜುನಾಥ ಎಸಿಬಿ ಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಆಹಾರ ಸಂರಕ್ಷಣಾಧಿಕಾರಿ ಟ್ರ್ಯಾಪ್ ಆಗಿದ್ದಾರೆ

ಎಸಿಬಿ ಎಸ್ಪಿ ಜಯಪ್ರಕಾಶ್ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ ನೇತೃತ್ವದಲ್ಲಿ ಕಾರ್ಯಾ ಚರಣೆ ನಡೆಸಲಾಯಿತು.ಎಸಿಬಿ ಅಧಿಕಾರಿಗಳು ಅಧಿಕಾರಿ ಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದಾಖಲಾತಿಗಳು ಲಂಚದ ಹಣ ಜಪ್ತಿ ಮಾಡಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.