ಕುಂದಗೋಳ ದಲ್ಲಿ ಮಾಜಿ ಮುಖ್ಯಮಂತ್ರಿ HDK ಹುಟ್ಟು ಹಬ್ಬ ಆಚರಣೆ – ಹಜರತ್ ಅಲಿ ಜೋಡಮನಿ ನೇತೃತ್ವದಲ್ಲಿ ಬಡ ಮಕ್ಕಳಿಗೆ ನೋಟ್ ಬುಕ್ ವಿತರಣೆ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ

Suddi Sante Desk
ಕುಂದಗೋಳ ದಲ್ಲಿ ಮಾಜಿ ಮುಖ್ಯಮಂತ್ರಿ HDK ಹುಟ್ಟು ಹಬ್ಬ ಆಚರಣೆ – ಹಜರತ್ ಅಲಿ ಜೋಡಮನಿ ನೇತೃತ್ವದಲ್ಲಿ ಬಡ ಮಕ್ಕಳಿಗೆ ನೋಟ್ ಬುಕ್ ವಿತರಣೆ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ

ಹುಬ್ಬಳ್ಳಿ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ 64ನೇ ಹುಟ್ಟು ಹಬ್ಬವನ್ನು ಧಾರವಾಡ ಜಿಲ್ಲೆ ಯಲ್ಲೂ ಆಚರಣೆ ಮಾಡಲಾಯಿತು.ಧಾರವಾಡ ಜಿಲ್ಲೆಯಾಧ್ಯಂತ ಸಡಗರ ಸಂಭ್ರಮಿದಿಂದ ಜನವರಿ ನಾಯಕನ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ್ದು ಕಂಡು ಬಂದಿತು.

ಜಿಲ್ಲೆಯ ಹಲವೆಡೆ ಅದ್ದೂರಿಯಾಗಿ ಅರ್ಥ ಪೂರ್ಣವಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು ಕಾರ್ಯಕರ್ತರು ಮುಖಂಡರು ಅಭಿಮಾನಿಗಳು.ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲಗಳನ್ನು ವಿತರಣೆ ಮಾಡಲಾಯಿತು.

ಶಾಲಾ ಮಕ್ಕಳಿಗೆ ನೋಟ್ ಬುಕ್ ಸೇರಿದಂತೆ ಹಲವು ವಸ್ತುಗಳ ವಿತರಣೆ ಮಾಡಿದ ಕಾರ್ಯ ಕರ್ತರು ಅರ್ಥಪೂರ್ಣವಾಗಿ ಕಾರ್ಯಗಳ ಮೂಲಕ ಜನನಾಯಕನ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಖಂಡರು ಅಭಿಮಾನಿಗಳು.

ತಿರುಮಲಕೊಪ್ಪ ರಂಭಾಪೂರಿ ರೇಣುಕಾ ಚಾರ್ಯ ಮಠದಲ್ಲಿ  ಈ ಒಂದು ಆಚರಣೆ ಕಂಡು ಬಂದಿತು.ಕುಂದಗೋಳ ತಾಲ್ಲೂಕಿನ ಜೆಡಿಎಸ್ ಪಕ್ಷದಿಂದ ಆಚರಣೆಯನ್ನು ಮಾಡಲಾಯಿತು. ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆಯನ್ನು ಮಾಡಿ ಬಡ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಿದರು.

ಕುಂದಗೋಳ ಹೆರಿಗೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲಗಳನ್ನು ವಿತರಣೆ ಮಾಡಲಾಯಿತು ಕುಂದಗೋಳ 13 ಘಟಕಗಳ ಪದಾಧಿಕಾರಿಗಳು ಕಾರ್ಯಕರ್ತರು ಅಲಿ ಎಮ್ ಸಂಧೀಮನಿ ನೇತ್ರತ್ವದಲ್ಲಿ ವಿತರಣೆ ಮಾಡಿದ್ದು ಕಂಡು ಬಂದಿತು ಇದೇ ವೇಳೆ ಹಜರತ್ ಅಲಿ ಜೋಡಮನಿ ಅವರು ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದರು.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.