ಅರಿವಿಲ್ಲದೆ ಖೆಡ್ಡಾ ಗೆ ಬಿದ್ದರಾ ಗೋಕಾಕ್ ಸಾಹುಕಾರ್ – ಮುಂದೇನು

Suddi Sante Desk

ಬೆಂಗಳೂರು –

ರಾಜ್ಯದ ರಾಜಕಾರಣದಲ್ಲಿ ಗೋಕಾಕ್ ನ ಜಾರಕಿಹೊಳಿ ಕುಟುಂಬದ್ದು ದೊಡ್ಡ ಹೆಸರು. ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಆ ಕುಟುಂಬದ ಯಾರಾದರೂ ಸದಸ್ಯರು ಪ್ರಮುಖ ಸ್ಥಾನವನ್ನು ಅಲಂಕರಿಸುತ್ತಾರೆ. ಇಂತಹ ಕುಟುಂಬದ ಪ್ರಮುಖ ಸದಸ್ಯ ರಮೇಶ್ ಜಾರಕಿಹೊಳಿ ಒಬ್ಬರು‌.ದೊಡ್ಡ ಕುಟುಂಬದ ಸಾಹುಕಾರ್ ಎಂದೇ ಹೆಸರಾದ ರಮೇಶ್ ಜಾರಕಿಹೊಳಿ ಅವರು ಈಗ ಲೈಂಗಿಕ ಕಿರುಕುಳ ಹಗರಣದಲ್ಲಿ ಸಿಲುಕಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಕೂಟ ಸರ್ಕಾರದಲ್ಲಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ, ಬೆಳಗಾವಿ ರಾಜಕಾರಣದ ವೇಳೆ ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಕಾರಣಕ್ಕೆ ಸಿಡಿದೆದ್ದಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಮುನಿಸು ಹೊಂದಿದ್ದ ರಮೇಶ್ ಜಾರಕಿಹೊಳಿ ಈ ಕಾರಣಕ್ಕಾಗಿಯೇ ಮೈತ್ರಿಕೂಟ ಸರ್ಕಾರಕ್ಕೆ ರಾಜೀನಾಮೆ ನೀಡಿ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಕರ್ತರಾಗಿದ್ದರು.

ಇದೀಗ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಅಧಿಕಾರದ ದುರ್ಬಳಕೆ ಜೊತೆಗೆ ಯುವತಿ ಯೊಬ್ಬರಿ ಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಆಡಿಯೋ ಹಾಗೂ ಸಿಡಿ ಬಹಿರಂಗವಾಗಿದ್ದು, ಇದರ ಜೊತೆಗೆ ರಮೇಶ್ ಜಾರಕಿಹೊಳಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.

ಇದರ ನಡುವೆ ರಮೇಶ್ ಜಾರಕಿಹೊಳಿಯವರನ್ನು ಹನಿಟ್ರ್ಯಾಪ್ ಮಾಡುವ ಮೂಲಕ ಬೇಕೆಂದೇ ಹೀಗೆ ಲೈಂಗಿಕ ಪ್ರಕರಣದಲ್ಲಿ ಸಿಲುಕಿಸಲಾಗಿದೆಯಾ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಈಗ ಬಹಿರಂಗ ವಾಗಿರುವ ಆಡಿಯೋ ಹಾಗೂ ಸಿಡಿ ಎಲ್ಲವೂ ಸಹ ಪೂರ್ವನಿಯೋಜಿತವಂತೆ ಕಂಡುಬರುತ್ತಿದ್ದು, ಇದ್ಯಾವುದರ ಅರಿವಿಲ್ಲದೆ ರಮೇಶ್ ಜಾರಕಿಹೊಳಿ ವಿರೋಧಿಗಳು ತೋರಿದ ಖೆಡ್ಡಾಕ್ಕೆ ಬಿದ್ದರಾ ಎಂಬ ಅನುಮಾನ ಕಾಡತೊಡಗಿದ್ದು ಈಗಾಗಲೇ ಈ ಕುರಿತು ಹೇಳಿದ್ದು ಮುಂದೇನು ಬೆಳವಣಿಗೆ ಗಳಾಗುತ್ತವೆ ಎಂಬುದನ್ನು ಕಾದು ನೋಡಬೇಕು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.