ಸರ್ಕಾರಿ ನೌಕರರ ಪ್ರತಿಭಟನೆ ಪೈನಲ್ ಹಗ್ಗ ಜಗ್ಗಾಟದ ನಡುವೆಯೂ ಹೋರಾಟಕ್ಕೆ ನಿರ್ಧಾರ…..

Suddi Sante Desk
ಸರ್ಕಾರಿ ನೌಕರರ ಪ್ರತಿಭಟನೆ ಪೈನಲ್ ಹಗ್ಗ ಜಗ್ಗಾಟದ ನಡುವೆಯೂ ಹೋರಾಟಕ್ಕೆ ನಿರ್ಧಾರ…..

ಬೆಂಗಳೂರು

ಕೊನೆಗೂ ರಾಜ್ಯದ ಸರ್ಕಾರಿ ನೌಕರರು ಹೋರಾಟದ ತೀರ್ಮಾನ ವನ್ನು ಕೈಗೊಂಡಿದ್ದಾರೆ ಹೌದು ಮುಖ್ಯಮಂತ್ರಿ ಮತ್ತು ಸಚಿವರ ನಡುವಿನ ಎರಡು ಸುತ್ತಿ‌ನ ಸಂಧಾನದ ಸಭೆಯ ನಂತರ ಮತ್ತೆ ಈ ಒಂದು ವಿಚಾರ ಕುರಿತು ಸಭೆ ಮಾಡಿದ ನೌಕರರ ಸಂಘಟನೆ ಯವರು ಹೋರಾಟ ಮಾಡುವ ಮಹತ್ವದ ತೀರ್ಮಾನಕ್ಕೆ ಬಂದಿದ್ದಾರೆ

ಬರೊಬ್ಬರಿ ಎರಡು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಕೊನೆಗೂ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುವ ನಿರ್ಧಾರ ವನ್ನು ತೆಗೆದುಕೊಂಡಿದ್ದಾರೆ.ಬೇಡಿಕೆ ಗಳ ಕುರಿತು ರಾಜ್ಯ ಸರ್ಕಾರ ಮತ್ತು ಸಚಿವರು ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಈ ಒಂದು ಮಹತ್ವದ ನಿರ್ಧಾರ ತಗೆದುಕೊಂಡಿದ್ದಾರೆ.

ಇದರೊಂದಿಗೆ ಬೇಡಿಕೆ ಗಳ ಜೊತೆಗೆ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರಾಜ್ಯದ ಸರ್ಕಾರಿ ನೌಕರರು ನಿರ್ಧಾರ ಕೈಗೊಂಡು ಬೀದಿಗಿಳಿಯಲಿ ದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.