This is the title of the web page
This is the title of the web page

Live Stream

March 2023
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ವಿಜಯಪುರ

ಯಡಿಯೂರಪ್ಪ ರವರ ಬಗ್ಗೆ ಅಪಾರ ಗೌರವವಿದೆ ಇನ್ನೂ ಮುಂದೆ ಅವರ ಬಗ್ಗೆ ಯಾವುದೇ ಪ್ರಶ್ನೆ ಕೇಳಬೇಡಿ ಬಸನಗೌಡ ಪಾಟೀಲ ಯತ್ನಾಳ್ – BSY ವಿರುದ್ಧದ ಸಂಘರ್ಷಕ್ಕೆ ಪೂರ್ಣ ವಿರಾಮದ ಮಾತು ಹೇಳಿದ ಯತ್ನಾಳ ಮಾತಿನ ಹಿಂದಿರುವುದು ಏನು…..


ವಿಜಯಪುರ

ಇನ್ನೂ ಮುಂದೆ ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರ ಬಗ್ಗೆ ಯಾವುದೇ ಪ್ರಶ್ನೆಯನ್ನು ನನ್ನನ್ನು ಕೇಳಬೇಡಿ ಎಂದು ಮಾಧ್ಯಮದವರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.ವಿಜಯಪುರದಲ್ಲಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆಗೆ ರಾಜಕೀಯ ಸಂಘರ್ಷಕ್ಕೆ ವಿರಾಮ ನೀಡುತ್ತೇನೆ ಯಡಿಯೂ ರಪ್ಪ ಜೊತೆ ರಾಜಿ ಮಾಡಿಕೊಂಡಿಲ್ಲ ಆದರೆ ಪಕ್ಷದ ಸೂಚನೆ ಮೇರೆಗೆ ಅವರೊಂದಿಗಿನ ರಾಜಕೀಯ ಸಂಘರ್ಷಕ್ಕೆ ಪೂರ್ಣ ವಿರಾಮ ನೀಡುತ್ತೇನೆ ಎಂದರು.

 

 

ಬಿಎಸ್ ವೈ ಕುರಿತು ನನಗೆ ಪ್ರಶ್ನೆಗಳನ್ನೆ ಕೇಳಬೇಡಿ ಅವರ ಬಗ್ಗೆ ಅಪಾರ ಗೌರವ ಇದೆ ಎನ್ನುತ್ತಾ ವ್ಯಂಗ್ಯದ ಮಾತುಗಳನ್ನಾಡಿದರು. ಯಡಿಯೂರ ಪ್ಪಗೆ ಬಯ್ಯೋದು ಬೇಡ ಅವರು ಹಿರಿಯರು ಇದ್ದಾರೆ. ಅವರ ಬಗ್ಗೆ ಮಾತನಾಡಬೇಡಿ ಎಂದು ಹೈಕಮಾಂಡ್ ಸೂಚಿಸಿದೆ ಚಿಲ್ಲರೆ ರಾಜಕಾರಣಿ ಗಳ ಬಗ್ಗೆ ಪ್ರತಿಕ್ರಿಯೆ ನೀಡದಂತೆಯೂ ಹೈಕ ಮಾಂಡ್ ಸೂಚಿಸಿದ್ದು ಪಕ್ಷದಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ ನೋಟಿಸ್ ನೀಡಲಾಗಿದೆ ಎಂಬ ಊಹಾಪೋಹಗಳು ಏಕೆ ಏಳ್ತಿದ್ದಾವೆ ಗೊತ್ತಿಲ್ಲ.

ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದರು.ಇನ್ನೂ ಕಳೆದ ವಾರವಷ್ಟೇ ವಿಜಯಪುರದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕಾರ್ಯ ಕ್ರಮಕ್ಕೆ‌ ಗೈರಾದ ವಿಚಾರ ಕುರಿತಂತೆಯೂ ಮಾತ ನಾಡಿದ ಅವರು  ನಾನು ನಡ್ಡಾ ಅವರಿಂದ ಅನುಮತಿ ಪಡೆದೇ ಕಾರ್ಯಕ್ರಮಕ್ಕೆ ಗೈರಾಗಿದ್ದೆ ಎಂದರು.ಒಟ್ಟಾರೆ ಈವರೆಗೆ ಯಡಿಯೂರಪ್ಪ ಕುಟುಂಬದ ಬಗ್ಗೆ ಏನೇಲ್ಲಾ ಮಾತನಾಡುತ್ತಿದ್ದು ಬಸನಗೌಡ ಪಾಟೀಲ ಯತ್ನಾಳ್ ಅವರು ಈಗ ಏಕಾಎಕಿಯಾಗಿ ಹೀಗೆ ಯಾಕೆ ಮಾತನಾಡು ತ್ತಿದ್ದಾರೆ ಎಂಬ ಮಾತುಗಳ ಹಿಂದೆ ಏನೋ ಇದೆ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ.

ಸುದ್ದಿ ಸಂತೆ ನ್ಯೂಸ್ ವಿಜಯಪುರ…..

 


Google News Join The Telegram Join The WhatsApp

 

 

Suddi Sante Desk

Leave a Reply