ಹೆಡ್​ ಕಾನ್​ಸ್ಟೇಬಲ್​ ರಮೇಶ್ ಡಂಬಳ ಅಪಘಾತಕ್ಕೆ ಬಲಿ – ಗಣೇಶ ಹಬ್ಬಕ್ಕಾಗಿ ಹೂ ಹಣ್ಣು ತಗೆದುಕೊಂಡು ಮನೆಗೆ ಹೊರಟಿದ್ದವನ ಬಲಿ ಪಡೆದ ಲಾರಿ‌…..

Suddi Sante Desk
ಹೆಡ್​ ಕಾನ್​ಸ್ಟೇಬಲ್​ ರಮೇಶ್ ಡಂಬಳ ಅಪಘಾತಕ್ಕೆ ಬಲಿ – ಗಣೇಶ ಹಬ್ಬಕ್ಕಾಗಿ ಹೂ ಹಣ್ಣು ತಗೆದುಕೊಂಡು ಮನೆಗೆ ಹೊರಟಿದ್ದವನ ಬಲಿ ಪಡೆದ ಲಾರಿ‌…..

ಗದಗ

ಲಾರಿಯೊಂದು ಹಾಯ್ದು ಹೆಡ್​ ಕಾನ್​ಸ್ಟೇಬಲ್​ ರೊಬ್ಬರು ಮೃತಪಟ್ಟಿರುವ ಘಟನೆ ಗದಗ ದಲ್ಲಿ ನಡೆದಿದೆ.ನಗರದ ಭೂಮರೆಡ್ಡಿ ಸರ್ಕಲ್​ನಲ್ಲಿ ಕಾಂಕ್ರಿಟ್​​ ಮಿಕ್ಸಿಂಗ್ ವಾಹನ ಹರಿದು ಹೆಡ್​ ಕಾನ್​ಸ್ಟೇಬಲ್​ ರಮೇಶ್ ಡಂಬಳ(42) ಎಂಬುವ ವರು ಸಾವನ್ನಪ್ಪಿದ್ದಾರೆ.

ಗಜೇಂದ್ರಗಡ ಪೊಲೀಸ್ ಠಾಣೆಯ ಹೆಡ್​ಕಾನ್​​ಸ್ಟೇಬಲ್ ಆಗಿದ್ದ ರಮೇಶ್ ಮನೆಯಲ್ಲಿ ಗಣಪತಿ ಪ್ರತಿಷ್ಠಾಪನೆ ಹಿನ್ನೆಲೆ ಹೊಂಡಾ ಎಕ್ಟಿವಾ ವಾಹನ ದಲ್ಲಿ ಸಾಕಿದ ನಾಯಿ ಕರೆದುಕೊಂಡು ಹೂವು-ಹಣ್ಣು ಸೇರಿ ಪೂಜೆ ಸಾಮಾಗ್ರಿಗಳನ್ನು ಖರೀದಿ ಮಾಡಿಕೊಂಡು ಮನೆ‌ಗೆ ಹೊರಟ್ಟಿದ್ದರು.

ಈ ವೇಳೆ ಯಮನಂತೆ ಆಗಮಿಸಿದ ಕಾಂಕ್ರಿಟ್​​ ಮಿಕ್ಸಿಂಗ್ ವಾಹನ ಹರಿದು ಘಟನೆಯಲ್ಲಿ ಮಾಲೀಕ ಸಾವನ್ನಪ್ಪಿದರೆ, ಸಾಕಿದ ನಾಯಿ ಬಚಾವ್ ಆಗಿದೆ.ಇತ್ತ ಮಾಲೀಕನ ಸಾವಿನಿಂದ ನಾಯಿ ಕಂಗಾಲಾಗಿದ್ದು ಮನೆಯವರ ದುಖಃ ಮುಗಿಲುಮುಟ್ಟಿದೆ.

ಸ್ಥಳಕ್ಕೆ ಡಿವೈಎಸ್​ಪಿ ಜೆ.ಹೆಚ್​.ಇನಾಮದಾರ, ಸಿಪಿಐ ಶಿವಯೋಗಿ ಹಾಗೂ ಪಿಎಸ್‌ಐ ಶಕುಂತಲಾ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಒಂದು ಕುರಿತು ದೂರು ದಾಖಲು ಮಾಡಿಕೊ‌ಂಡು ತನಿಖೆ ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಗದಗ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.