ಮುಖ್ಯೋಪಾಧ್ಯಾಯ ಸದಾನಂದ ಪಟಗಾರ ಇನ್ನೂ ನೆನಪು ಮಾತ್ರ – ಹೃದಯಾಘಾತದಿಂದ ನಿಧನರಾದ ಹಿರಿಯ ಶಿಕ್ಷಕನಿಗೆ ನಾಡಿನ ಶಿಕ್ಷಕ ಬಂಧುಗಳಿಂದ ಭಾವಪೂರ್ಣ ನಮನ ಸಂತಾಪ

Suddi Sante Desk
ಮುಖ್ಯೋಪಾಧ್ಯಾಯ ಸದಾನಂದ ಪಟಗಾರ ಇನ್ನೂ ನೆನಪು ಮಾತ್ರ – ಹೃದಯಾಘಾತದಿಂದ ನಿಧನರಾದ ಹಿರಿಯ ಶಿಕ್ಷಕನಿಗೆ ನಾಡಿನ ಶಿಕ್ಷಕ ಬಂಧುಗಳಿಂದ ಭಾವಪೂರ್ಣ ನಮನ ಸಂತಾಪ

ಬಾಗಲಕೋಟೆ

ಹೃದಯಘಾತದಿಂದ ಹಿರಿಯ ಮುಖ್ಯೋ ಪಾಧ್ಯಯರೊಬ್ಬರೊಬ್ಬರು ನಿಧನರಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.ಹೌದು ಜಿಲ್ಲೆಯ ಹುನಗುಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದ ಸದಾ ಹಸನ್ಮುಖಿಯಾಗಿದ್ದ ಸದಾನಂದ ಪಟಗಾರ ರವರೇ ನಿಧನರಾಗಿರುವ ಮುಖ್ಯೋಪಾಧ್ಯಾಯ ರಾಗಿದ್ದಾರೆ.

ಬೆಳಗಿನ ಜಾವ ತೀವ್ರ ಹೃದಯಾಘಾ ಕಾಣಿಸಿಕೊಂ ಡಿತು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗುವ ದಾರಿಯದಲ್ಲಿಯೇ ನಿಧನ ರಾಗಿದ್ದಾರೆ.ಇಲಾಖೆಯಲ್ಲಿ ಸಾಕಷ್ಟು ಪ್ರಮಾಣ ದಲ್ಲಿ ಸಾಧನೆ ವಿದ್ಯಾರ್ಥಿಗಳಿಗೆ ತುಂಬಾ ಅಚ್ಚು ಮೆಚ್ಚಿನ ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ಸದಾನಂದ ಅವರ ನಿಧನಕ್ಕೆ ನಾಡಿನ ಶಿಕ್ಷಕ ಬಂಧುಗಳು ಸಂತಾಪವನ್ನು ಸೂಚಿಸಿದ್ದಾರೆ.

ಇನ್ನೂ ಮೃತರ ಅಂತ್ಯಕ್ರಿಯೆಯೂ ಸ್ವಗ್ರಾಮ ಕುಮಟಾದಲ್ಲಿ ನೆರವೇರಲಿದೆ.ಇನ್ನೂ ರಾಜ್ಯದ ಮೂಲೆ ಮೂಲೆಗಳಿಂದ ಸರ್ವ ಶಿಕ್ಷಕ ಬಂಧುಗಳು ಇವರ ನಿಧನಕ್ಕೆ ತೀವ್ರವಾದ ಸಂತಾಪವನ್ನು ಸೂಚಿಸಿದ್ದು ಶಿಗ್ಗಾವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಚೇರಿಯ ಸಿಬ್ಬಂದಿ ವರ್ಗ ಎಲ್ಲಾ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಸಂತಾಪವನ್ನು ಸೂಚಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.

ಅರುಣ ಹುಡೇಡಗೌಡ್ರು ಸೇರಿದಂತೆ ಶಿಗ್ಗಾವ ನ ಮತ್ತು ರಾಜ್ಯದ ಸಮಸ್ತ ಸರ್ಕಾರಿ ನೌಕರರು ಶಿಕ್ಷಕರು ಸಂತಾಪವನ್ನು ಸೂಚಿಸಿ ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ

ಸುದ್ದಿ ಸಂತೆ ನ್ಯೂಸ್ ಡೆಸ್ಕ್……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.