ಮುಖ್ಯಶಿಕ್ಷಕ ಸುಖೇಂದ್ರ ಅತ್ಮಹತ್ಯೆ – ಕೆಲಸದ ಒತ್ತಡದಿಂದ ಸಾವಿಗೆ ಶರಣಾದ ಸರ್ಕಾರಿ ಶಾಲಾ ಶಿಕ್ಷಕ…..

Suddi Sante Desk
ಮುಖ್ಯಶಿಕ್ಷಕ ಸುಖೇಂದ್ರ ಅತ್ಮಹತ್ಯೆ – ಕೆಲಸದ ಒತ್ತಡದಿಂದ ಸಾವಿಗೆ ಶರಣಾದ ಸರ್ಕಾರಿ ಶಾಲಾ ಶಿಕ್ಷಕ…..

ಚನ್ನಪಟ್ಟಣ

ಕೆಲಸದ ಒತ್ತಡ ತಾಳಲಾರದೆ ತಾಲೂಕಿನ ಎಲೆ ತೋಟದಹಳ್ಳಿ ಸರಕಾರಿ ಮಾಧ್ಯಮಿಕ ಶಾಲೆಯ ಮುಖ್ಯ ಶಿಕ್ಷಕ ಸುಖೇಂದ್ರ (58) ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ತಾಲೂಕಿನ ಬೈರಾಪಟ್ಟಣ ಗ್ರಾಮದವರಾ ಗಿರುವ ಇವರು ಶಾಲೆಯಲ್ಲಿ ಶಿಕ್ಷಕರ ಅಭಾವದ ಜತೆಗೆ ಇತ್ತೀಚೆಗೆ ಸರಿಯಾಗಿ ಪಾಠ ನಡೆಯುತ್ತಿಲ್ಲ ಎಂದು ಪಾಲಕರು ಗಲಾಟೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಗುರುವಾರ ಮುಖ್ಯ ಶಿಕ್ಷಕ ತಮ್ಮ ಮನೆಯಲ್ಲಿ ವಿಷ ಸೇವಿಸಿದ್ದರು ಅವರನ್ನು ಮಂಡ್ಯದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ.ಇನ್ನೂ ಇತ್ತೀಚೆಗೆ ರಾಜ್ಯದಲ್ಲಿ ಸರ್ಕಾರಿ ಶಾಲಾ ಶಿಕ್ಷಕರಿಗೆ ಕೆಲಸದ ಒತ್ತಡ ಎಷ್ಟು ಆಗುತ್ತಿದೆ ಎಂಬೊದಕ್ಕೆ ಈ ಒಂದು ಘಟನೆ ಸಾಕ್ಷಿ ಯಾಗಿದ್ದು ಸರ್ಕಾರ ಇಲಾಖೆಯ ಸಚಿವರು ಮೇಲಾಧಿ ಕಾರಿಗಳು ಪರಿಶೀಲನೆ ಮಾಡೊದು ಅವಶ್ಯಕತೆ ಇದೆ

ಸುದ್ದಿ ಸಂತೆ ನ್ಯೂಸ್ ಚನ್ನಪಟ್ಟಣ…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.