ಆರೋಗ್ಯ ನಿರೀಕ್ಷಿಕ ಅಧಿಕಾರಿ ಪದ್ಮಾವತಿ ತುಂಬಗಿಯವರಿಗೆ ಒಲಿದು ಬಂತು ಅತ್ಯುತ್ತಮ ಸೇವಾ ಪುರಸ್ಕಾರ ಗೌರವ – ಚಳಿ,ಮಳೆ,ಬಿಸಿಲು ಎನ್ನದೇ ಪೌರಕಾರ್ಮಿಕರೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಪದ್ಮಾವತಿಯವರ ಕರ್ತವ್ಯ ನಿಷ್ಠೆಗೆ ಸಂದಿತು ಅತ್ಯುತ್ತಮ ಸೇವಾ ಪುರಸ್ಕಾರ ಗೌರವ…..

Suddi Sante Desk
ಆರೋಗ್ಯ ನಿರೀಕ್ಷಿಕ ಅಧಿಕಾರಿ ಪದ್ಮಾವತಿ ತುಂಬಗಿಯವರಿಗೆ ಒಲಿದು ಬಂತು ಅತ್ಯುತ್ತಮ ಸೇವಾ ಪುರಸ್ಕಾರ ಗೌರವ – ಚಳಿ,ಮಳೆ,ಬಿಸಿಲು ಎನ್ನದೇ ಪೌರಕಾರ್ಮಿಕರೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಪದ್ಮಾವತಿಯವರ ಕರ್ತವ್ಯ ನಿಷ್ಠೆಗೆ ಸಂದಿತು ಅತ್ಯುತ್ತಮ ಸೇವಾ ಪುರಸ್ಕಾರ ಗೌರವ…..

ಹುಬ್ಬಳ್ಳಿ

ಆರೋಗ್ಯ ನಿರೀಕ್ಷಿಕ ಅಧಿಕಾರಿ ಪದ್ಮಾವತಿ ತುಂಬಗಿ ಯವರಿಗೆ ಒಲಿದು ಬಂತು ಅತ್ಯುತ್ತಮ ಸೇವಾ ಪುರಸ್ಕಾರ ಗೌರವ – ಚಳಿ,ಮಳೆ,ಬಿಸಿಲು ಎನ್ನದೇ ಪೌರಕಾರ್ಮಿಕರೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಪದ್ಮಾವತಿಯವರ ಕರ್ತವ್ಯ ನಿಷ್ಠೆಗೆ ಸಂದಿತು ಅತ್ಯುತ್ತಮ ಸೇವಾ ಪುರಸ್ಕಾರ ಗೌರವ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಆರೋಗ್ಯ ನಿರೀಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪದ್ಮಾವತಿ ತುಂಬಗಿಯವರಿಗೆ ಅತ್ಯುತ್ತಮ ಸೇವಾ ಪುರಸ್ಕಾರ ಗೌರವ ಪ್ರಶಸ್ತಿ ಒಲಿದು ಬಂದಿದೆ.ಪ್ರತಿ ವರ್ಷ ಗಣರಾಜ್ಯೋತ್ಸ ದಿನಾಚರಣೆಯ ದಿನದಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಕೊಡ ಮಾಡುವ ಈ ಒಂದು ಪ್ರಶಸ್ತಿಯನ್ನು ಪದ್ಮಾವತಿಯ ವರನ್ನುಆಯ್ಕೆ ಮಾಡಿ ಪ್ರಧಾನ ಮಾಡಲಾಯಿತು.

ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಈ ಒಂದು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಪಾಲಿಕೆಯ ನಿರ್ಗಮಿತ ಆಯುಕ್ತರಾಗಿರುವ ಡಾ ಈಶ್ವರ ಉಳ್ಳಾಗಡ್ಡಿ ಯವರು ಈ ಒಂದು ಪ್ರಶಸ್ತಿಯನ್ನು ನೀಡಿ ಗೌರವಿಸಿದರು

ಕಳೆದ 7 ವರ್ಷಗಳಿಂದ ಪಾಲಿಕೆಯ ಧಾರವಾಡದಲ್ಲಿ ಆರೋಗ್ಯ ನಿರೀಕ್ಷಕರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿ ದ್ದಾರೆ.ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಿಕರಾದ ಪದ್ಮಾವತಿ ತುಂಬಗಿ ಯವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ನೀಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸ ಲಾಯಿತು.

ಇವರ ಸೇವೆಯನ್ನ ಗುರುತಿಸಿದ ಮಹಾನಗರ ಪಾಲಿಕೆ ಇಂದು ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಈ ಒಂದು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.ಚಳಿ ಮಳೆ ಬಿಸಿಲು ಎನ್ನದೇ ದಿನ ಸೂರ್ಯ ಉದಯಿಸುವ ಮುನ್ನವೇ ಪೌರ ಕಾರ್ಮಿಕರೊಂದಿಗೆ ಗಲ್ಲಿ ಗಲ್ಲಿ ಸುತ್ತಾಡುತ್ತಾ ಸ್ವಚ್ಚ ಸುಂದರ ನಗರದ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ಇವರ ಸೇವಾ ಕಾರ್ಯವನ್ನು ಗುರುತಿಸಿ ಈ ಒಂದು ಪ್ರಶಸ್ತಿಯನ್ನು ನೀಡಿ ಗೌರವಿಸ ಲಾಗಿದೆ.

ಸೇವಾ ರತ್ನ ಪ್ರಶಸ್ತಿ ಪಡೆದುಕೊಂಡು ಇವರಿಗೆ ಉಪ ಆಯುಕ್ತರಾಗಿರುವ ಅರವಿಂದ ಜಮಖಂಡಿ, ಮುಖ್ಯ ಲೆಕ್ಕಾಧಿಕಾರಿಯಾಗಿರುವ ವಿಶ್ವನಾಥ,ಉಪ ಆಯುಕ್ತ ರಾಗಿರುವ ವಿಜಯಕುಮಾರ,ಪೌರ ಕಾರ್ಮಿಕ ಮುಖಂಡರಾಗಿರುವ ಮಧು,ಭೀಮರಾಜ ಸೇರಿದಂತೆ ಪಾಲಿಕೆಯ ಸಿಬ್ಬಂದಿಗಳು ಅಧಿಕಾರಿಗಳು ಪೌರಕಾರ್ಮಿ ಕರು ಸೇರಿದಂತೆ ಹಲವು ಅಧಿಕಾರಿಗಳು ಸಿಬ್ಬಂದಿಗಳು ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.