ಮರೆಯಾದ ಸಹ ಶಿಕ್ಷಕಿ – ಭಾರತಿ ಟೀಚರ್ ನಿಧನಕ್ಕೆ ನಾಡಿನ ಶಿಕ್ಷಕ ರಿಂದ ಭಾವಪೂರ್ಣ ನಮನ ಸಂತಾಪ…..

Suddi Sante Desk

ಶಿರಹಟ್ಟಿ –

ರಾಜ್ಯದಲ್ಲಿ ಮತ್ತೋರ್ವ ಆದರ್ಶ ಶಿಕ್ಷಕಿ ಯೊಬ್ಬರು ನಿಧನ ರಾಗಿದ್ದಾರೆ. ಹೌದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಳೆಹೊಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಸಹ ಶಿಕ್ಷಕಿ ಆಗಿದ್ದ ಭಾರತಿ ದೊಡಮನಿ ಅವರೇ ಮೃತರಾದ ಶಿಕ್ಷಕಿಯಾಗಿದ್ದಾರೆ

ಶ್ರೀಮತಿ ಭಾರತಿ ದೊಡ್ಮನಿ ಸಹ ಶಿಕ್ಷಕಿ ಇವರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲು ತ್ತಿದ್ದರು‌ ರಜೆಯ ಮೇಲೆ ಇದ್ದ ಇವರು ಚಿಕಿತ್ಸೆ ಯನ್ನು ಪಡೆದುಕೊಳ್ಳುತ್ತಿದ್ದರು.ಚಿಕ್ಕ ವಯಸ್ಸಿ ನಲ್ಲಿಯೇ ಮೃತರಾಗಿದ್ದು ಇಲಾಖೆಗೆ ತುಂಬಲಾರದ ನಷ್ಟವಾಗಿದೆ

ಮೃತರಾದ ಭಾರತಿ ಟೀಚರ್ ಗೆ ಇಬ್ಬರು ಮಕ್ಕಳು ಇದ್ದರು.ಪತಿಯವರು ಉಪನ್ಯಾಸಕ ರಾಗಿದ್ದರು ಇನ್ನೂ ಇವರ ನಿಧನಕ್ಕೆ ನಾಡಿನ ಮೂಲೆ ಮೂಲೆ ಗಳಿಂದ ಶಿಕ್ಷಕ ಬಂಧುಗಳು ಅದರಲ್ಲೂ ಗ್ರಾಮೀಣ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘ ಜೊತೆಗೆ ಸಾವಿತ್ರಿ ಭಾಯಿ ಫುಲೆ ಮಹಿಳಾ ಶಿಕ್ಷಕಿಯರ ಸಂಘ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದ ಸರ್ವ ಸದಸ್ಯರು ಸಂತಾಪ ಸೂಚಿಸಿದ್ದಾರೆ. ಅದರ ಲ್ಲೂ ಆರ್ ನಾರಾಯಣಸ್ವಾಮಿ, ಮಲ್ಲಿಕಾರ್ಜುನ ಉಪ್ಪಿನ,ಶರಣಬಸವ ಬನ್ನಿಗೋಳ ಎಲ್ ಐ ಲಕ್ಕಮ್ಮನವರ,ಚಂದ್ರಶೇಖರ ಶೆಟ್ರು, ಪವಾಡೆಪ್ಪ, ಎಸ್ ಎಫ್ ಪಾಟೀಲ್, ಚಿರಂತಿಮಠ, ಗುರು ತಿಗಡಿ,ಇನ್ನೂ ಶಂಭುಲಿಂಗನಗೌಡ ಪಾಟೀಲ್, ಚಂದ್ರಶೇಖರ ನುಗ್ಲಿ,ಲತಾ ಎಸ್ ಮುಳ್ಳೂರು, ಜ್ಯೋತಿ ಹೆಚ್ ಸೇರಿದಂತೆ ಹಲವರು ಭಾವಪೂರ್ಣ ನಮನ ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ.

ಇನ್ನೂ ಇವರೊಂದಿಗೆ ಶಿರಹಟ್ಟಿ ಬಿಇಓ ಆರ್ ಎಸ್ ಬುರುಡಿ,ಸಿಆರ್ ಪಿ ಡಿ ಎಮ್ ದ್ಯಾಮನ್ನವರ, ಹೊಸೂರಿನ ಶಾಲೆಯ ಶಿಕ್ಷಕ ಬಂಧು ಗಳಾದ ಜಿ ಪಿ ಹಿರೇಮಠ, ಫಕೀರೆಶ ಡಂಬಳ,ಎನ್ ಬಿ ಸಾಗನೂರು ರಮೇಶ ಹಾಲನ್ನವರ,ರಾಜೇಶ್ವರಿ ಹುಣಸಿಮರದ ಅರುಂಧತಿ ಎ ಆರ್,ಸೇರಿದಂತೆ ಹಲವರು ಭಾವಪೂರ್ಣ ನಮನ ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ.ಇನ್ನೂ ಮೃತ ಶಿಕ್ಷಕಿ ಯ ಅಂತ್ಯಕ್ರಿಯೆ ಸ್ವಗ್ರಾಮವಾದ ಬಾಗಲಕೋಟೆ ಜಿಲ್ಲೆ ಮುದ್ದೇಬಿ ಹಾಳ ತಾಲೂಕು ಮಡಿಕೇಶ್ವರ ದಲ್ಲಿ ಇಂದು ಸಂಜೆ ನೆರವೇರಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.