ಬೆಂಗಳೂರು –
7ನೇ ವೇತನ ಆಯೋಗದ ವಿಚಾರದಲ್ಲಿ ಸಭೆ ಯನ್ನು ಮಾಡುವಂತೆ ಒತ್ತಾಯವನ್ನು ರಾಜ್ಯದ ಸರ್ಕಾರಿ ನೌಕರರು ಪರವಾಗಿ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ನೇತ್ರತ್ವದಲ್ಲಿ ನಿಯೋಗ ಒತ್ತಾಯವನ್ನು ಮಾಡಿದೆ ಹೌದು ಈ ಒಂದು ವಿಚಾರ ದಲ್ಲಿ ಆಯೋಗದ ಸದಸ್ಯ ಕಾರ್ಯದರ್ಶಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಭೇಟಿಯಾದ ನಿಯೋಗವು ಒತ್ತಾಯ ವನ್ನು ಮಾಡಿದೆ.
ವೇತನ ಆಯೋಗ ಕುರಿತು ಮಾಹಿತಿಯನ್ನು ಈ ಕೂಡಲೇ ನೀಡುವಂತೆ ಸಿ.ಎಸ್.ಷಡಾಕ್ಷರಿ ನೇತೃತ್ವದಲ್ಲಿನ ನಿಯೋಗವು ಆಗ್ರಹವನ್ನು ಮಾಡಿದ್ದು ಹೀಗಾಗಿ ಈ ಕೂಡಲೇ ಸಭೆ ಮಾಡು ವಂತೆ ಒತ್ತಾಯವನ್ನು ಮಾಡಿದ್ದಾರೆ.
ಬೆಂಗಳೂರಿನಲ್ಲಿ 7ನೇ ವೇತನ ಆಯೋಗದ ಸದಸ್ಯ ಕಾರ್ಯದರ್ಶಿ ಶ್ರೀಮತಿ ಹೆಬ್ಸಿಬಾ ರಾಣಿ ಕೊರ್ಲಪಾಟಿ IAS ಇವರನ್ನು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ರವರ ನೇತೃತ್ವದ ನಿಯೋಗವು ಭೇಟಿ ಮಾಡಿ ಸಂಘದ ಪದಾಧಿಕಾರಿಗಳೊಂದಿಗೆ 7ನೇ ವೇತನ ಆಯೋಗದ ಸಭೆ ಏರ್ಪಡಿಸುವಂತೆ ಮನವಿ ಮಾಡಲಾಯಿತು.ಇದಕ್ಕೆ ಪೂರಕವಾಗಿ ಸ್ಪಂದಿಸಿದ ವೇತನ ಆಯೋ ಗದ ಸದಸ್ಯ ಕಾರ್ಯದರ್ಶಿಗಳು ಶೀಘ್ರ ಸಭೆ ಏರ್ಪಡಿಸಲಾಗುವುದೆಂದು ತಿಳಿಸಿ ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..