ಗ್ರಾಪಂ ಚುನಾವಣಾ ಕರ್ತವ್ಯ ನಿರತ ಪ್ರೌಢ ಶಾಲಾ ಶಿಕ್ಷಕ ಸಾವು – ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವಿಗೀಡಾದ ಶಿಕ್ಷಕ

Suddi Sante Desk

ದಾವಣಗೆರೆ –

ಗ್ರಾಪಂ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಶಿಕ್ಷಕನೊರ್ವ ಸಾವಿಗೀಡಾದ ಘಟನೆ ದಾವಣಗೇರಿಯಲ್ಲಿ ನಡೆದಿದೆ.ನಿನ್ನೇ ಚುನಾವಣೆ ಕರ್ತವ್ಯಕ್ಕೇ ಪ್ರೌಢ ಶಾಲಾ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು.ದಾವಣಗೇರಿಯ ಕೊಟ್ಟೂರು ತಾಲ್ಲೂಕು ಚಿರಭಿ ಪ್ರೌಢ ಶಾಲಾ ಶಿಕ್ಷಕ ಸಕ್ರಿ ಪ್ರಕಾಶ್ ಸಾವನ್ನಪ್ಪಿದ ಶಿಕ್ಷಕನಾಗಿದ್ದಾರೆ.

ಗ್ರಾ ಪಂ ಚುನಾವಣೆ ನಿಮಿತ್ಯ ಬೇವೂರು ಗ್ರಾಪಂ ಗೆ ಪಿಆರ್ ಓ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಚುನಾವಣಾ ಕರ್ತವ್ಯ ವೇಳೆ ಶೌಚಾಲಯಕ್ಕೆಂದು ತೆರಳಿದ್ದರು. ಶೌಚಾಲಯದಲ್ಲಿ ಕಾಲು ಜಾರಿ ಬಿದ್ದಿದ್ದ ಶಿಕ್ಷಕ ಸಕ್ರಿ ಪ್ರಕಾಶ್ ಗಾಯಗೊಂಡಿದ್ದ ಪ್ರಕಾಶ್ ನನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾವಣಗೆರೆಯ ಹೈಟೆಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶಿಕ್ಷಕ ಪ್ರಕಾಶ್ ಇಂದು ಸಾವಿಗೀಡಾಗಿದ್ದಾರೆ.‌ ಸಕ್ರಿ ಪ್ರಕಾಶ್ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ತೆಲಿಗಿ ಗ್ರಾಮದ ನಿವಾಸಿಯಾಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.