ಬೆಂಗಳೂರು –
ರಾಜ್ಯದಲ್ಲಿನ ಹಿಂದಿ ಶಿಕ್ಷಕರ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ಹಿಂದಿ ಶಿಕ್ಷಕರ ಸಂಘ ದಿಂದ ಶಿಕ್ಷಣ ಸಚಿವರನ್ನು ಭೇಟಿಯಾಗಲಾಯಿತು. ಬೆಂಗಳೂರಿನಲ್ಲಿ ಭೇಟಿಯಾದ ಶಿಕ್ಷಕರ ನಿಯೋಗ ಕೆಲವೊತ್ತು ಕುಳಿತುಕೊಂಡು ಮಾತುಕತೆ ಮಾಡಿದರು ಸಧ್ಯ ಕಳೆದ ಹಲವಾರು ವರ್ಷಗಳಿಂದ ಸಮಸ್ಯೆ ಗಳನ್ನು ಅನುಭವಿಸುತ್ತಾ ವೃತ್ತಿಯನ್ನು ಮಾಡುತ್ತಿ ರುವ ಕುರಿತಂತೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ಗಮನಕ್ಕೆ ತಗೆದುಕೊಂಡು ಬಂದರು.
ಜೊತೆಗೆ ಪ್ರಮುಖವಾಗಿ ಹಿಂದಿ ಶಿಕ್ಷಕರ ಸಮಸ್ಯೆ ಗಳನ್ನು ಬಗೆಹರಿಸಲು ಸಮಗ್ರವಾಗಿ ಚರ್ಚಿಸಲಾ ಯಿತು. ಇದೇ ವೇಳೆ ಸಚಿವರು ಈ ಒಂದು ಶಿಕ್ಷಕರ ನಿಯೋಗಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ಈ ಒಂದು ಸಮಯದಲ್ಲಿ ಸಂಘದ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.