This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ – ಮೂರು ಕೊಲೆಗಳಿಂದ ಬೆಚ್ಚಿ ಬಿದ್ದಿ ಶಿವಮೊಗ್ಗ ಜನತೆ…..

WhatsApp Group Join Now
Telegram Group Join Now

ಶಿವಮೊಗ್ಗ –

ಎರಡು ಕೊಲೆ ನಡೆದ ಬೆನ್ನಲ್ಲೇ ಶಿವಮೊಗ್ಗ ದಲ್ಲಿ ಮತ್ತೊಂದು ಕೊಲೆ ನಡೆದಿದ್ದು ಅಲ್ಲದೇ ಮನೆಗೆ ನುಗ್ಗಿ ದಾಂಧಲೆ ಘಟನೆ ಯಿಂದಾಗಿ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ‌‌.ಹೌದು ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಸೀಗೆ ಹಟ್ಟಿಯಲ್ಲಿ ಹಲವೆಡೆ ವಾಹನಗಳಿಗೆ ಬಂಕಿ ಸೇರಿದಂತೆ ಮನೆಗಳಿಗೆ ನುಗ್ಗಿದ ಗುಂಪು ಮನೆಯಲ್ಲಿದ ಸಾಮಾನುಗಳು ಸೇರಿದಂತೆ ಟಿ.ವಿ,ಬೀರು ಹಾಗೂ ಇತರೇ ವಸ್ತುಗಳನ್ನು ಪುಡಿ-ಪುಡಿ ಮಾಡಿದ್ದಾರೆ.

ಅಪಾರ ಸಂಖ್ಯೆಯಲ್ಲಿದ್ದ ಈ ಗುಂಪನ್ನು ನೋಡಿದ ಜನರು ಬಯಬೇತರಾಗಿದ್ದು ಏನು ಮಾಡದ ಪರಿಸ್ಥಿತಿ ನಿರ್ಮಾಣ ವಾಗಿದೆ.ಇನ್ನು ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ತೆರಳಿದ್ದು ಜನರಿಂದ ವಿವರಣೆ ಪಡೆಯೋಕೆ ಮುಂದಾಗಿದ್ದು ಈ ವೇಳೆ ಪೊಲೀಸರ ಮೇಲೆ ಜನರು ಆಕ್ರೋಶಗೊಂಡ ಘಟನೆಯೂ ಸಂಭವಿಸಿದೆ.

ಇನ್ನು ಶಿವಮೊಗ್ಗ ನಗರದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು ಯಾವ ಕ್ಷಣದಲ್ಲಿ ಬೇಕಾದರು ಪರಿಸ್ಥಿತಿ ಬಿಗಡಾಯಿಸಬ ಹುದು ಎನ್ನಲಾಗುತ್ತಿದೆ.ಈ ಹಿನ್ನೆಲೆ ಶಿವಮೊಗ್ಗ ಜಿಲ್ಲಾಧಿಕಾ ರಿಗಳು ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದು ಹೆಚ್ಚಿನ ಭದ್ರತೆಗಾಗಿ ಹೊರಜಿಲ್ಲೆಗಳಿಂದಲೂ ಪೊಲೀಸರನ್ನು ಕರೆಸಿಕೊಳ್ಳಲಾಗುತ್ತಿದೆ.ಘಟನೆ ನಡೆದು ಕಲವೇ ಹೊತ್ತಿನಲ್ಲಿ ಐ.ಜಿ ಕೂಡ ಶಿವಮೊಗ್ಗಕ್ಕೆ ಬಂದಿದ್ದು ಪರಿಸ್ಥಿತಿಯ ಮೇಲೆ ನಿಗಾವಹಿಸಿದ್ದಾರೆ.ಇದುವರೆಗೂ ಹಿಜಾಬ್‌ ವಿಷಯದಿಂದ ಶಿವಮೊಗ್ಗ ತತ್ತರಿಸಿಹೊಗಿದ್ರೆ ಇದಾಗುತ್ತಿದಂತೆ ಈಗ ಹರ್ಷ ಕೊಲೆಯಿಂದಾಗಿ ಶಿವಮೊಗ್ಗದ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಗಳೇ ಹೆಚ್ಚಿದೆ.


Google News

 

 

WhatsApp Group Join Now
Telegram Group Join Now
Suddi Sante Desk