ಭೀಕರ ಅಪಘಾತ ಧಾರವಾಡದ 6 ಜನ ಸಾವು – ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿಯಾದ ಕಾರು ಮುಗಿಲು ಮುಟ್ಟಿದ ಆಕ್ರಂದನ…..

Suddi Sante Desk
ಭೀಕರ ಅಪಘಾತ ಧಾರವಾಡದ 6 ಜನ ಸಾವು – ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿಯಾದ ಕಾರು ಮುಗಿಲು ಮುಟ್ಟಿದ ಆಕ್ರಂದನ…..

ಬೆಳಗಾವಿ

ಭೀಕರ ಅಪಘಾತ ಧಾರವಾಡದ 6 ಜನ ಸಾವು – ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿಯಾದ ಕಾರು ಮುಗಿಲು ಮುಟ್ಟಿದ ಆಕ್ರಂದನ

ಚಾಲಕನ ನಿಯಂತ್ರಣವನ್ನು ಕಳೆದುಕೊಂಡ ಕಾರೊಂದು ಮರಕ್ಕೆ ಡಿಕ್ಕಿಯಾಗಿ 6 ಜನ ಸಾವಿಗೀ ಡಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಹೌದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಸಮೀಪ ಈ ಒಂದು ಭೀಕರಅಪಘಾತ ನಡೆದಿದೆ.ಘಟನೆಯಲ್ಲಿ ಸ್ಥಳದಲ್ಲೇ ಆರು ಜನರು ಮೃತಪಟ್ಟಿದ್ದಾರೆ.ಮದುವೆ ಮುಗಿಸಿ ಮನೆಗೆ ವಾಪಸ್​ ಆಗುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ಎಲ್ಲಾ ಪೀಸ್​ ಪೀಸ್​ ಆಗಿದೆ.

ಕಾರು ಚಾಲಕ ಶಾರುಕ್ ಪೆಂಡಾರಿ(30)ಇಕ್ಬಾಲ್ ಜಮಾದಾರ್(50) ಸಾನಿಯಾ ಲಂಗೋಟಿ(37) ಉಮ್ರಾ ಬೆಗಮ್ ಲಂಗೋಟಿ(17)ಶಬನಮ್ ಲಂಗೋಟಿ(37) ಪರಾನ್ ಲಂಗೋಟಿ(13) ಮೃತ ರಾದವರಾಗಿದ್ದಾರೆ.ಇವರೆಲ್ಲರೂ ಧಾರವಾಡವರಾ ಗಿದ್ದು ಒಂದೇ ಕಾರಿನಲ್ಲಿ ಒಂಬತ್ತು ಜನ ಪ್ರಯಾಣಿ ಸುತ್ತಿದ್ದರು.ಅಪಘಾತದ ಸುದ್ದಿಯನ್ನು ತಿಳಿಯುತ್ತಿ ದ್ದಂತೆ ಸ್ಥಳಕ್ಕೆ ಎಸ್ಪಿ ಡಾ ಭೀಮಾಶಂಕರ ಗುಳೇದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇನ್ನೂ ಇತ್ತ ಧಾರವಾಡದಲ್ಲಿ ಕುಟುಂಬದವರನ್ನು ಕಳೆದುಕೊಂಡಿರುವ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಸುದ್ದಿ ಸಂತೆ ನ್ಯೂಸ್ ಬೆಳಗಾವಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.