ಹಬ್ಬ ಹೇಗೆ ಮಾಡಬೇಕು ಬೆಳಗಾದರೆ ಶಾಲೆಗೆ ಹೇಗೆ ಬರಬೇಕು – ಅರ್ಥವಾಗದ ಶಿಕ್ಷಕರ ಗೋಳು ಯಾರಿಗೂ ಕೇಳುತ್ತಿಲ್ಲ ಕಾಣುತ್ತಿಲ್ಲ…..

Suddi Sante Desk
ಹಬ್ಬ ಹೇಗೆ ಮಾಡಬೇಕು ಬೆಳಗಾದರೆ ಶಾಲೆಗೆ ಹೇಗೆ ಬರಬೇಕು – ಅರ್ಥವಾಗದ ಶಿಕ್ಷಕರ ಗೋಳು ಯಾರಿಗೂ ಕೇಳುತ್ತಿಲ್ಲ ಕಾಣುತ್ತಿಲ್ಲ…..

ಬೆಂಗಳೂರು

ಹಬ್ಬ ಹೇಗೆ ಮಾಡಬೇಕು ಬೆಳಗಾದರೆ ಶಾಲೆಗೆ ಹೇಗೆ ಬರಬೇಕು – ಅರ್ಥವಾಗದ ಶಿಕ್ಷಕರ ಗೋಳು ಯಾರಿಗೂ ಕೇಳುತ್ತಿಲ್ಲ ಕಾಣುತ್ತಿಲ್ಲ

ದಸರಾ ಹಬ್ಬನೂ ಮುಗಿತು ದಸರಾ ರಜೆಯೂ ಮುಗಿತು ಹಬ್ಬ ಮುಗಿದ ಕೂಡಲೇ ರಜೆಯೂ ಮುಗಿತು ಅಕ್ಟೋಬರ್ 25 ರಿಂದ ರಾಜ್ಯಾದ್ಯಂತ ಶಾಲೆಗಳು ಆರಂಭವಾಗಲಿದ್ದು ಹೀಗಾಗಿ ಈಗಾ ಗಲೇ ರಜೆ ಗೆಂದು ಊರಿಗೆ ತೆರಳಿ ಹಬ್ಬದ ಮೂಡ್ ನಲ್ಲಿರುವ ಶಿಕ್ಷಕರು ಅದರಲ್ಲೂ ದೂರದ ಊರಿಗೆಂದು ಹೋಗಿರುವ ಶಿಕ್ಷಕರು ಹೇಗೆ ಊರಿ ನಿಂದ ಬರಬೇಕು ಬೆಳಗಾಗುತ್ತಲೆ ಹೇಗೆ ಕಾರ್ಯ ಕ್ಷೇತ್ರಕ್ಕೆ ಬರಬೇಕು

ಹೇಗೆ ಕರ್ತವ್ಯಕ್ಕೆ ಬರಬೇಕು ಇದ್ಯಾವುದು ಯಾರಿಗೂ ಅರ್ಥವಾಗುತ್ತಿಲ್ಲ. ಅರ್ಥವಾದರೂ ಕೂಡಾ ಕೇಳಿ ಕೇಳಲಾರದಂತೆ ಇದ್ದಾರೆ ರಜೆ ಯನ್ನು ಒಂದು ವಾರ ಅಂದರೆ ಮೊದಲು ಇರುವ ದಸರಾ ರಜೆಯ ಮಾದರಿಯಲ್ಲಿಯೇ ನೀಡು ವಂತೆ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಸೇರಿದಂತೆ ನಾಡಿನ ಶಿಕ್ಷಕ ಬಂಧುಗಳು ಒತ್ತಾಯ ವನ್ನು ಮಾಡಿದರು ಆದರೂ ಕೂಡಾ ಶಿಕ್ಷಣ ಸಚಿವರು ಯಾರ ಮಾತಿಗೂ ಸ್ಪಂದಿಸಲಿಲ್ಲ ಕ್ಯಾರೆ ಎನ್ನಲಿಲ್ಲ ಹೀಗಾಗಿ ಅಕ್ಟೋಬರ್ 25 ರಿಂದ ರಾಜ್ಯಾಧ್ಯಂತ ಸರ್ಕಾರಿ ಅನುದಾನಿತ ಶಾಲೆಗಳು ಆರಂಭವಾಗಲಿದ್ದು ಇದು ಒಂದು ವಿಚಾರವಾದರೆ

ಇನ್ನೂ ಇತ್ತ ಈಗಾಗಲೇ ದಸರಾ ರಜೆಯ ಹಿನ್ನಲೆ ಯಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಿರುವ ಶಿಕ್ಷಕರು ಹೇಗೆ ಬರಬೇಕು ಎಂಬ ಒಂದು ಮುಂದಾಲೋಚನೆ ಇಲ್ಲದೇ ಇರುವ ಅಧಿಕಾ ರಿಗಳು ಇಲಾಖೆಯ ಸಚಿವರು ಇದ್ದ ಇಲ್ಲದಂತಾ ಗಿದ್ದು ಶಿಕ್ಷಕರು ಗೋಳು ಕೇಳೊರಿಲ್ಲದಂತಾಗಿದ್ದು ಇದೊಂದು ದುರ್ದೈವದ ಸಂಗತಿಯಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.