ಮಾನವೀಯತೆ ಮೆರೆದ ಸಚಿವ ಸಂತೋಷ ಲಾಡ್ – ಪ್ರಯಾಣಿಸುತ್ತಿದ್ದ ದಾರಿಯಲ್ಲಿ ಅಪಘಾತ ನೋಡಿ ಸ್ಪಂದಿಸಿ ಅಗತ್ಯ ನೆರವಿಗೆ ಸೂಚಿಸಿದ ಸಂತೋಷ ಲಾಡ್…..

Suddi Sante Desk
ಮಾನವೀಯತೆ ಮೆರೆದ ಸಚಿವ ಸಂತೋಷ ಲಾಡ್ – ಪ್ರಯಾಣಿಸುತ್ತಿದ್ದ ದಾರಿಯಲ್ಲಿ ಅಪಘಾತ ನೋಡಿ ಸ್ಪಂದಿಸಿ ಅಗತ್ಯ ನೆರವಿಗೆ ಸೂಚಿಸಿದ ಸಂತೋಷ ಲಾಡ್…..

ಧಾರವಾಡ

ಕಾರ್ಮಿಕ ಸಚಿವ ಸಂತೋಷ ಲಾಡ್ ಮಾನವೀ ಯತೆ ಮೆರೆದಿದ್ದಾರೆ ಹೌದು  ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌  ಅಳ್ನಾವರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಆಯೋಜಿ ಸಲಾಗಿದ್ದ ಸಾರ್ವಜನಿಕ ಕುಂದುಕೊರತೆ ಸಭೆ ಗಳಲ್ಲಿ ಪಾಲ್ಗೊಂಡು ಧಾರವಾಡಕ್ಕೆ ಮರಳುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಅಪಘಾತವಾದ ಸ್ಥಳಕ್ಕೆ ತೆರಳಿ ಪೊಲೀಸರಿಂದ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು

ಸಚಿವ ಲಾಡ್‌ ಅವರು, ಅರವಟಿಗೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಮುಗಿಸಿ ಧಾರವಾಡಕ್ಕೆ ವಾಪಸ್ಗಾಗುತ್ತಿದ್ದರು.ಈ ವೇಳೆ ಕಾರು ಅಪಘಾತಕ್ಕೀಡಾಗಿ ಮಹಿಳೆಯೊಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದರು.

ಅಪಘಾತದ ಕುರಿತು ಮಾಹಿತಿ ಪಡೆದ ಸಚಿವರು ಅಗತ್ಯ ನೆರವು ಒದಗಿಸುವಂತೆ ಪೊಲೀಸರಿಗೆ ಸೂಚಿಸಿ ನಂತರ ಪ್ರಯಾಣ ಮುಂದುವರಿಸಿದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.