This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

Sports News

ಮುಖ್ಯ ಶಿಕ್ಷಕನ ಮೇಲೆ ಹಲ್ಲೆ ಶಾಲೆಗೆ ಬಾರದ ವಿದ್ಯಾರ್ಥಿಯನ್ನು ವಿಚಾರಸಲು ಹೋಗಿದ್ದೆ ತಪ್ಪಾ…..

WhatsApp Group Join Now
Telegram Group Join Now

ಕುಣಿಗಲ್ –

ಶಾಲೆಗೆ ಗೈರು ಹಾಜರಾಗಿದ್ದ ವಿದ್ಯಾರ್ಥಿಯನ್ನು ಶಾಲೆಗೆ ಕಳಿಸುವಂತೆ ಕೇಳಲು ಹೋಗಿದ್ದ ಮುಖ್ಯ ಶಿಕ್ಷಕರೊಬ್ಬರ ಮೇಲೆ ಹಲ್ಲೆಯನ್ನು ಮಾಡಿದ ಘಟನೆ ಕುಣಿಗಲ್ ನಲ್ಲಿ ನಡೆದಿದೆ.ಹೌದು ಪೋಷಕರ ಬಳಿ ಮುಖ್ಯ ಶಿಕ್ಷಕನ್ನು ಕೇಳುತ್ತಿದ್ದ ವೇಳೆ ಪಾನಮತ್ತರಾಗಿದ್ದ ಇಬ್ಬರು ವ್ಯಕ್ತಿಗಳು ಹಲ್ಲೆಯನ್ನು ಮಾಡಿದ್ದಾರೆ.ತಾಲೂಕಿನ ಕಸಬಾ ಹೋಬಳಿ ಲಾಳಾಪುರ ಗ್ರಾಮದಲ್ಲಿ ನಡೆದಿದೆ.ಹೇರೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮುಖ್ಯ ಶಿಕ್ಷಕ ಜಿ.ಆರ್. ನಾಗರಾಜು ಹಲ್ಲೆಗೆ ಒಳಗಾದ ಶಿಕ್ಷಕರಾಗಿದ್ದಾರೆ.

ಲಾಳಾಪುರ ಕಾಲೋನಿಯ ವಿದ್ಯಾರ್ಥಿ ಸೋಮಶೇಖರ್ ಹಲವು ದಿನಗಳಿಂದ ಶಾಲೆಗೆ ಗೈರು ಹಾಜರಾಗಿದ್ದರಿಂದ ಪೋಷಕರನ್ನು ಕೇಳಲು ಮುಖ್ಯ ಶಿಕ್ಷಕ ಜಿ.ಆರ್.ನಾಗರಾಜು ಮಂಗಳವಾರ ಸಂಜೆ ಪೋಷಕರ ಮನೆಗೆ ಭೇಟಿ ನೀಡಿ ವಿಚಾರಿಸುತ್ತಿದ್ದಾಗ ಪಕ್ಕದ ಪೆಟ್ಟಿಗೆ ಅಂಗಡಿ ಬಳಿ ಕುಳಿತ್ತಿದ್ದ ಪ್ರಸಾದ್ ಎಂಬುವವನು, ಅವರ ಮಕ್ಕಳನ್ನು ವಿಚಾರಿಸುತ್ತಿ ಯಾ ನಮ್ಮ ಮಕ್ಕಳನ್ನು ಏಕೆ ವಿಚಾರಿಸುವುದಿಲ್ಲ ಎಂದು ಕೇಳಿದ್ದ. ಇದಕ್ಕೆ ಶಿಕ್ಷಕ ನೀವು ಯಾರು ನನಗೆ ಗೊತ್ತಿಲ್ಲ, ನಿಮ್ಮ ಮಕ್ಕಳು ನಮ್ಮ ಶಾಲೆಗೆ ಬರುತ್ತಿಲ್ಲ ಎಂದು ಹೇಳಿದಾಗ ನೀನು ಕತ್ತೆ ಕಾಯುತ್ತಿದ್ದೀಯ ಎಂದು ಅವಾಚ್ಯ ಶಬ್ದಗಳಿಂದ ಮುಖ್ಯ ಶಿಕ್ಷಕರನ್ನು ನಿಂದಿಸಿ ಅವರ ಶರ್ಟ್ ಕಾಲರ್ ಹಿಡಿದು ತಲೆ ಹಾಗೂ ಕಪ್ಪಾಳದ ಮೇಲೆ ಹೊಡೆದು ಬಳಿಕ ಮತ್ತೊಬ್ಬ ವ್ಯಕ್ತಿ ಅವನ ಜೊತೆಯಲ್ಲಿ ಬಂದು ಇಬ್ಬರು ಸೇರಿ ಹಲ್ಲೆ ಮಾಡಿದ್ದಾರೆ.ಈ ಸಂಬಂಧ ಕ್ರಮಕೈ ಗೊಂಡು ರಕ್ಷಣೆ ನೀಡುವಂತೆ ಮುಖ್ಯ ಶಿಕ್ಷಕ ಠಾಣೆಗೆ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk