ಕಣ್ಮುಚ್ಚಿ ಕುಳಿತ ಮಹಾನಗರ ಪಾಲಿಕೆ – ನಿಮಗೆ ಸಾಮಾಜಿಕ ಜವಾಬ್ದಾರಿ ಇದ್ದರೆ ಚೆನ್ನಮ್ಮ ಸರ್ಕಲ್ ನೋಡಿ ಹನಿ ಹನಿ ನೀರಿನ ಜನರು ಪರದಾಡುತ್ತಿದ್ದರೆ ನೀವೆನು ಮಾಡತಾ ಇದ್ದೀರಾ…..

Suddi Sante Desk
ಕಣ್ಮುಚ್ಚಿ ಕುಳಿತ ಮಹಾನಗರ ಪಾಲಿಕೆ – ನಿಮಗೆ ಸಾಮಾಜಿಕ ಜವಾಬ್ದಾರಿ ಇದ್ದರೆ ಚೆನ್ನಮ್ಮ ಸರ್ಕಲ್ ನೋಡಿ ಹನಿ ಹನಿ ನೀರಿನ ಜನರು ಪರದಾಡುತ್ತಿದ್ದರೆ ನೀವೆನು ಮಾಡತಾ ಇದ್ದೀರಾ…..

ಹುಬ್ಬಳ್ಳಿ

ಚೆನ್ಮಮ್ಮ ವೃತ್ತದಲ್ಲಿ ಹರಿಯುತ್ತಿದೆ ಕುಡಿಯುವ ನೀರು ನೋಡಿ ನೋಡಲಾರದಂತೆ ಇದ್ದಾರೆ ಮಹಾನಗರ ಪಾಲಿಕೆಯ ಅಧಿಕಾರಿಗಳು

ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿಗಾಗಿ ಪರದಾಟ ಶುರುವಾಗಿದೆ.ಹನಿ ಹನಿ ನೀರಿಗಾಗಿ ಪರದಾಡುತ್ತಿರುವುದು ಕಂಡು ಬರುತ್ತಿದೆ.ಹೀಗಿರುವಾಗ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಪೈಪ್ ಲೈನ್ ವೊಂದು ಒಡೆದಿದ್ದು ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ.

ರಾತ್ರಿಯಿಂದ ನಿರಂತರವಾಗಿ ಮಲಪ್ರಭಾ ನದಿಯ ನೀರು ಹರಿದು ಹೋಗುತ್ತಿದ್ದರು ಇದನ್ನು ದುರಸ್ತಿ ಮಾಡುತ್ತಿಲ್ಲ ಯಾರು ನೋಡುತ್ತಿಲ್ಲ ಹೀಗಾಗಿ ಚೆನ್ನಮ್ಮ ವೃತ್ತವೊ ಅಥವಾ ಯಾವುದೇ ಪಟ್ಟಣವೊ ಎಂಬ ಪರಸ್ಥಿತಿಯ ಚಿತ್ರಣ ಕಂಡು ಬರುತ್ತಿದೆ.

ಒಂದು ಕಡೆಗೆ ಸಧ್ಯ ಎಂಟು ಒಂಬತ್ತು ದಿನಗ ಳಿಗೊಮ್ಮೆ ಕುಡಿಯುವ ನೀರು ಬರುತ್ತಿದ್ದು ಜನರು ಪರದಾಡುತ್ತಿದ್ದು ಹೀಗಿರುವಾಗ ಅಪಾರ ಪ್ರಮಾ ಣದಲ್ಲಿ ಕುಡಿಯುವ ನೀರು ಪೈಪ್ ಒಡೆದು ಪೊಲಾಗುತ್ತಿದ್ದರು ಕೂಡಾ ಮಹಾನಗರ ಪಾಲಿಕೆಯವರು ಮೌನವಾಗಿದ್ದಾರೆ.

ಹೌದು ಕುಡಿಯುನ ನೀರು ಮಹತ್ವವಾಗಿದ್ದು ಹನಿ ಹನಿ ನೀರಿಗಾಗಿ ಪರದಾಡುತ್ತಿರುವ ಪರಸ್ಥಿತಿಯ ನಡುವೆ ಚರಂಡಿಯಂತೆ ಪೈಪ್ ಲೈನ್ ಒಡೆದು ಹರಿಯುತ್ತಿರುವ ನೀರಿನ ಪೈಪ್ ನ್ನು ಇನ್ನಾದರೂ ಕಂಡು ಕಾಣದಂತೆ ಇರುವ ಮಹಾನಗರ ಪಾಲಿಕೆ ಯವರು

ಅದರಲ್ಲೂ ಎಲ್ ಆಂಡ್ ಟಿ ಕಂಪನಿ ಯವರು ಈ ಕೂಡಲೇ ತುರ್ತಾಗಿ ಇದನ್ನು ದುರಸ್ತಿ ಮಾಡಿ ಮತ್ತಷ್ಟು ರಸ್ತೆಗಳು ಹಾಳಾಗುವ ಮುನ್ನ ಸ್ಪಂದಿ ಸುವುದು ಅವಶ್ಯಕವಿದೆ ಈ ಒಂದು ಕಾರ್ಯ ವನ್ನು ಪಾಲಿಕೆಯ ಆಯುಕ್ತರು ಮಾಡಿಸುತ್ತಾ ರೆಯಾ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.