ಬೆಂಗಳೂರು –
ಈಗಾಗಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗ ರಚನೆ ಮಾಡಿದ ಬೆನ್ನಲ್ಲೇ ದಿನ ಕ್ಕೊಂದು ಹೊಸ ಹೊಸ ಬೆಳವಣಿಗಳು ಹೊಸ ಹೊಸ ಚಟುವಟಿಕೆಗಳು ನಡೆಯುತ್ತಿವೆ ರಾಜ್ಯ ಸರ್ಕಾರ ಕೂಡಾ ಈಗಾಗಲೇ ಸಮಿತಿ ರಚನೆ ಮಾಡಿ ಆದೇಶ ಮಾಡಿ ಅದಕ್ಕೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳ ಕುರಿತಂತೆ ಸಿಬ್ಬಂದಿ ಗಳನ್ನು ಕೂಡಾ ನೇಮಕ ಮಾಡಿ ಸಾಲದಂತೆ ಕಚೇರಿ ಯನ್ನು ಕೂಡಾ ನೀಡಿ ಆದೇಶವನ್ನು ಮಾಡಿದೆ
ಕಚೇರಿಯನ್ನು ನೀಡಿ ಆದೇಶವನ್ನು ಹೊರಡಿಸಿದ ಬೆನ್ನಲ್ಲೇ ಈಗ 7ನೇ ವೇತನ ಆಯೋಗದ ಅಧ್ಯಕ್ಷ ಡಾ ಸುಧಾಕರ್ ರಾವ್ ಅವರು ಮಹತ್ವದ ಸಭೆ ಯನ್ನು ಕರೆದಿದ್ದಾರೆ.ಹೌದು ಇಷ್ಟೇಲ್ಲ ಬೆಳವಣಿಗೆ ನಡೆದ ಮೇಲೆ ಮುಂದಿನ ಕಾರ್ಯ ಚಟುವಟಿಕೆ ಗಳ ಕುರಿತಂತೆ ಚರ್ಚೆಯನ್ನು ಮಾಡಲು ಇಂದು ಮಹತ್ವದ ಈ ಒಂದು ಸಭೆಯನ್ನು ಅಧ್ಯಕ್ಷರು ಆಹ್ವಾನ ಮಾಡಿದ್ದಾರೆ
ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ನಡೆಯಲಿ ರುವ ಮಹತ್ವದ ಸಭೆಯಲ್ಲಿ 7ನೇ ವೇತನ ಆಯೋಗದ ಸಮಿತಿಯ ಕಾರ್ಯ ಚಟುವಟಿಕೆ ಗಳ ಕುರಿತಂತೆ ಹಾಗೇ ಮುಂದಿನ ಪ್ಲಾನ್ ಗಳ ಕುರಿತಂತೆ ಮಹತ್ವದ ಚರ್ಚೆ ಮಾತುಕತೆಯೂ ನಡೆಯಲಿದ್ದು ಪ್ರಮುಖವಾಗಿ ಕಚೇರಿ ಆರಂಭ ಕುರಿತಂತೆ ಮತ್ತೆ ಸಧ್ಯ 44 ಸಿಬ್ಬಂದಿಗಳನ್ನು ಸಮಿತಿಗೆ ನೀಡಿದ್ದು ಇದರ ನೇಮಕಾತಿಯನ್ನು ಕೂಡಾ ರಾಜ್ಯ ಸರ್ಕಾರ ಸ್ವತಂತ್ರವಾಗಿ ನೀಡಿದ್ದು ಯಾರು ಯಾರನ್ನು ನೇಮಕಾತಿ ಮಾಡಿಕೊಳ್ಳ ಬೇಕು ರೂಪರೇಷೆಗಳ ಕುರಿತಂತೆ ಅಧ್ಯಕ್ಷರು ಸಭೆಯಲ್ಲಿ ಚರ್ಚೆಯನ್ನು ಮಾಡಲಿದ್ದಾರೆ.
ಅಧ್ಯಕ್ಷರೊಂದಿಗೆ ಈ ಒಂದು ಸಭೆಯಲ್ಲಿ ಸಮಿತಿಯ ಮೂವರು ಸದಸ್ಯರು ರಾಜ್ಯ ಸರ್ಕಾರದ ಕೆಲ ಅಧಿಕಾರಿಗಳು ಕೂಡಾ ಪಾಲ್ಗೊಂಡು ಸಮಿತಿಯ ಈ ಒಂದು ಸಭೆಗೆ ಸಾಥ್ ನೀಡಿ ರಾಜ್ಯ ಸರ್ಕಾರದಿಂದ ಇನ್ನೂ ಅವಶ್ಯಕವಾಗಿ ಬೇಕಾದ ವ್ಯವಸ್ಥೆಯನ್ನು ಸೌಲಭ್ಯ ಗಳನ್ನು ಪಟ್ಟಿ ಮಾಡಲಿದ್ದು ಸಹಕಾರ ನೀಡಲಿದ್ದಾರೆ ಎಂಬ ಮಾತುಗಳಿಲು ಕೇಳಿ ಬರಲಿದ್ದು ಏನೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್….