ಶಾಲೆಗೆ ಬರುತ್ತಿರುವ ಮಕ್ಕಳ, ಶಿಕ್ಷಕರ ಬಗ್ಗೆ ಮಾಹಿತಿ ನೀಡದ ಅಧಿಕಾರಿಗಳಿಗೆ ಕ್ಲಾಸ್ ತಗೆದು ಕೊಂಡ ಶಿಕ್ಷಣ ಸಚಿವರು – ಇಲಾಖೆ ಯ ಅಧಿಕಾರಿಗಳಿಗೆ ಸಭೆಯಲ್ಲಿ ತರಾಟೆಗೆ ತಗೆದುಕೊಂಡ ಬಿ ಸಿ ನಾಗೇಶ್…..

Suddi Sante Desk

ಕೊಡಗು –

ಪ್ರತಿನಿತ್ಯ ಶಾಲೆಗೆ ಬರುತ್ತಿರುವ ಮಕ್ಕಳ ಮತ್ತು ಶಿಕ್ಷಕರ ಬಗ್ಗೆ ಮಾಹಿತಿಯನ್ನು ಕೊಡದ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಾಥಮಿಕ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಕ್ಲಾಸ್ ತಗೆದುಕೊಂಡರು.ಹೌದು ಕೊಡಗಿನಲ್ಲಿ ಕೋವಿಡ್ ಕುರಿ ತಂತೆ ಮಾಹಿತಿಯನ್ನು ಪಡೆದುಕೊಳ್ಳಲು ಸಭೆಯನ್ನು ಕರೆದಿದ್ದರು ಈ ಒಂದು ಸಭೆಯಲ್ಲಿ ಇಲಾಖೆಯ ಕುರಿತಂತೆ ಅದರಲ್ಲೂ ಶಾಲೆಗೆ ಬರುತ್ತಿರುವ ಶಿಕ್ಷಕರ ಮತ್ತು ಮಕ್ಕಳ ಕುರಿತಂತೆ ಮಾಹಿತಿಯನ್ನು ಕೇಳಿದರು

ಈ ಕುರಿತಂತೆ ಮಾಹಿತಿ ನೀಡಲು ಹಿಂದೇಟು ಹಾಕಿದರು ಮಾಹಿತಿ ನೀಡದ ಹಿನ್ನಲೆಯಲ್ಲಿ ಸಚಿವರು ಅಧಿಕಾರಿಗಳಿಗೆ ಕ್ಲಾಸ್ ತಗೆದುಕೊಂಡರು.ಶಿಕ್ಷಣ ಇಲಾಖೆಯ ಅಧಿಕಾರಿಗ ಳಿಗೆ ಮತ್ತು ವೈಧ್ಯಾಧಿಕಾರಿಗಳಿಗೆ ಸಖತ್ ತರಾಟೆಗೆ ತಗೆದು ಕೊಂಡು ಶಾಲೆ ಕಾಲೇಜಿಗೆ ಬರುತ್ತಿರುವ ವಿಧ್ಯಾರ್ಥಿಗಳು ಮತ್ತು ಶಿಕ್ಷಕರ ಬಗ್ಗೆ ಮಾಹಿತಿ ಇಲ್ಲದೆ ಯಾಕೆ ಸಭೆಗೆ ಬಂದಿ ದ್ದಿರಾ ಎಂದರು.

ಕೋವಿಡ್ ನಿಯಂತ್ರಣದ ಪರಿಶೀಲನಾ ಸಭೆಯಲ್ಲಿ ಈ ಒಂದು ಘಟನೆ ನಡೆದಿದೆ. ಕೊಡಗು ಉಸ್ತುವಾರಿ ಸಚಿವ ಬಿ ಸಿ ನಾಗೇಶ್ ಮತ್ತು ಶಾಸಕರ ನೇತ್ರತ್ವದಲ್ಲಿ ನಡೆದ ಸಭೆ ಯಲ್ಲಿ ಕಂಡು ಬಂದಿತು. ಶಾಲೆಗೆ ಗೈರಾದ ಮಕ್ಕಳು ಹಾಜ ರಾದ ಮಕ್ಕಳ ಬಗ್ಗೆ ಮತ್ತು ಶಿಕ್ಷಕರ ಬಗ್ಗೆ ಮಾಹಿತಿ ಇಲ್ಲ ಅಂದ್ರೆ ಕರೋನಾ ಬಂದಿರುವ ಮಕ್ಕಳ ಬಗ್ಗೆ ಮತ್ತು ಶಿಕ್ಷಕ ರಿಗೆ ಬಗ್ಗೆ ಹೇಗೆ ತಿಳಿಯುತ್ತೆ ಎಂದು ಪುಲ್ ಕ್ಲಾಸ್ ತಗೆದು ಕೊಂಡರು.

ಜಿಲ್ಲೆಯಲ್ಲಿ ಶಾಸಕರು ಎಷ್ಟು ಇದ್ದಾರೆ ಅಂತಾನಾದ್ರು ಗೋತ್ತಾ ಎಂದು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು ಸಚಿವರು.ಜಿಲ್ಲೆಯಲ್ಲಿ ಒಟ್ಟು 1033 ವಿಧ್ಯಾರ್ಥಿಗಳಿಗೆ ಪಾಸಿಟಿವ್. ಪಾಸಿಟಿವ್ ಬಂದಿರುವ ಶಿಕ್ಷಕರ ಬಗ್ಗೆ ಮಾಹಿತಿ ಕೊಡದ ಆಧಿಕಾರಿಗಳು.ಕೋವಿಡ್ ಹರಡಿರುವ ಜಿಲ್ಲೆಯಲ್ಲಿ ಒಟ್ಟು 12 ಶಾಲೆಗಳಿಗೆ ರಜೆ ನೀಡಲಾಗಿದ್ದು ಇದೇಲ್ಲಾ ಮಾಹಿತಿಯನ್ನು ಸರಿಯಾಗಿ ನೀಡಿಲ್ಲ ಹೀಗಾಗಿ ಗರಂ ಆದ ಸಚಿವರು ತರಾಟೆಗೆ ತಗೆದುಕೊಂಡಿದ್ದು ಕಂಡು ಬಂದಿತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.