This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

ಧಾರವಾಡ

ಕುಂದಗೋಳ ದಲ್ಲಿ M R ಪಾಟೀಲ ರಿಗೆ ಸಿಗುತ್ತಿದೆ ಜನಬೆಂಬಲ – ಬದಲಾವಣೆ ಬಯಸಿ MRP ಯವರೇ ಈ ಬಾರಿ ನಮ್ಮ ಶಾಸಕರು ಎನ್ನುತ್ತಿದ್ದಾರೆ ಮತದಾರರು…..

ಕುಂದಗೋಳ ದಲ್ಲಿ M R ಪಾಟೀಲ ರಿಗೆ ಸಿಗುತ್ತಿದೆ ಜನಬೆಂಬಲ – ಬದಲಾವಣೆ ಬಯಸಿ MRP ಯವರೇ ಈ ಬಾರಿ ನಮ್ಮ ಶಾಸಕರು ಎನ್ನುತ್ತಿದ್ದಾರೆ ಮತದಾರರು…..
WhatsApp Group Join Now
Telegram Group Join Now

ಕುಂದಗೋಳ

ಎಮ್.ಆರ್.ಪಾಟೀಲ್’ಗೆ ಕುಂದಗೋಳ ಕ್ಷೇತ್ರದಲ್ಲಿ ಕಂಡು ಬರುತ್ತಿದೆ ಅಭೂತಪೂರ್ವ ಜನಬೆಂಬಲ

ಹೌದು ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಮ್.ಆರ್. ಪಾಟೀಲ್’ಗೆ ಜನರು ಭರ್ಜರಿಯಾಗಿ ಸ್ವಾಗತಿಸಿ ದ್ದಾರೆ.ಹೌದು ಪ್ರಚಾರದ ವೇಳೆ ಬೃಹತ್ ಸೇಬು ಹಣ್ಣಿನ ಮಾಲೆ,ಹೂ ಮಳೆ ಸುರಿಸಿ ಕ್ಷೇತ್ರಗಳಲ್ಲಿ ಜನರು ತಮ್ಮ ಗ್ರಾಮಕ್ಕೆ ಅದ್ದೂರಿ ಸ್ವಾಗತ ಕೋರುತ್ತಿರುವ ಚಿತ್ರಣ ಕಂಡು ಬಂದಿತು‌.

ಕ್ಷೇತ್ರದ ಯಲಿವಾಳ, ಅದರಗುಂಚಿ, ನೂಲ್ವಿ, ಹಿರೇಹರಕುಣಿ ಗ್ರಾಮಗಳಲ್ಲಿ ಎಮ್.ಆರ್ .ಪಾಟೀಲ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಶಾಸಕರ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ,ರೈತರಿಗೆ ನೆರವಾಗುವ ಕೆಲಸ ಮಾಡಲಿಲ್ಲ.ಜನ ಬದಲಾಗಿದ್ದಾರೆ. ಬುದ್ದಿವಂತರಾ ಗಿದ್ದಾರೆ ಎಂದರು.

ಯಾವುದು ಸತ್ಯ ಎನ್ನುವ ತೀರ್ಮನ ಮಾಡುವ ಪ್ರಬುದ್ದತೆ ಕುಂದಗೋಳ ಕ್ಷೇತ್ರದ ಮತದಾರರಿಗೆ ಇದೆ. ಈ ಬಾರಿ ಕ್ಷೇತ್ರ ಹಸ್ತ ಮುಕ್ತವಾಗುವುದು ಖಚಿತ ಎಂದು ಹೇಳಿದರು.ಈ ಭಾಗದಲ್ಲಿ ಅಭಿವೃದ್ಧಿ, ಸಾಮಾಜಿಕ ನ್ಯಾಯದ ತಳಹದಿಗೆ ಜಯ ಸಿಗಲಿದೆ. ಅಂತಹ ಪ್ರಜ್ಞಾವಂತ ಹೃದಯ ವಂತರನ್ನು ಹೊಂದಿರುವ ತಾಲೂಕು ನಮ್ಮದು. ಅಭಿವೃದ್ಧಿ ಎಂಬ ಒಂದೇ ಮಂತ್ರದ ಮೇಲೆ ಸಾಗುತ್ತಿದ್ದೇನೆ.

ಇದಕ್ಕೆ ತಮ್ಮೇಲ್ಲರ ಸಹಕಾರ ಮುಖ್ಯ. ನನ್ನ ಮೇಲೆ ವಿಶ್ವಾಸ ಇಟ್ಟು ಅತ್ಯಧಿಕ ಮತಗಳನ್ನು ನೀಡಿ ಆಯ್ಕೆ ಮಾಡಿದರೇ ನಿಮ್ಮ ಸೇವಕನಾಗಿ ಕ್ಷೇತ್ರದ ಪ್ರಗತಿಗಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.

ಮುಂದುವರೆದು ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಸಮೃದ್ದಿ ಮಾಡಬೇಕೆಂಬ ಪರಿಕಲ್ಪನೆಯಿಂದ ಸಾಗುತ್ತಿದ್ದೇನೆ. ಅದಕ್ಕಾಗಿ ನಿಮ್ಮ ಸೇವಕನಾಗಿ ಮತಗಳ ರೂಪದಲ್ಲಿ ಆರ್ಶೀವಾದ ಕೇಳಲು ಬಂದಿದ್ದೇನೆ.ಆರ್ಶೀವಾದ ರೂಪದಲ್ಲಿ ಮತ ನೀಡಿ ಹಾರೈಸಿ ಎಂದು ವಿನಂತಿ ಸಿದರು.

ಈ ಸಂದರ್ಭದಲ್ಲಿ ಡಿ ವಾಯ್ ಲಕ್ಕನಗೌಡ್ರ ಎನ್ ಎನ್ ಪಾಟೀಲ ಪ್ರಕಾಶಗೌಡ ಪಾಟೀಲ ರಂಗನ ಗೌಡ ಪಾಟೀಲ ಮಾಲತೇಶ ಶಾಗೂಟ್ಟಿ ಬಸವ ರಾಜ ವಾಯ್ ಸಿ ಕುಮಾರಗೌಡರ ಮುಂತಾದ ಪ್ರಮುಖರು ಇದ್ದರು.

ಸುದ್ದಿ ಸಂತೆ ನ್ಯೂಸ್ ಕುಂದಗೋಳ…..


Google News

 

 

WhatsApp Group Join Now
Telegram Group Join Now
Suddi Sante Desk