ಕ್ಲಾಸ್ ನಲ್ಲಿಯೇ ಪ್ರಾಚಾರ್ಯರು ಉಪನ್ಯಾಸಕರ ಪೈಟ್ – ಕೇಳಿದ ಕ್ಲಾಸ್ ಕೊಡಲಿಲ್ಲ ಅಂತಾ ಹೊಡೆ ದಾಟ ದೂರು ದಾಖಲು…..

Suddi Sante Desk

ತುಮಕೂರು –

ಕಾಲೇಜಿನ ಪ್ರಾಚಾರ್ಯರೊಬ್ಬರು ಕೇಳಿದ ಕ್ಲಾಸ್ ಕೊಡಲಿಲ್ಲ ಅಂತಾ ಅವರ ಮೇಲೆ ಹಲ್ಲೆಯನ್ನು ಮಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.ಕಾಲೇಜ್ ನಲ್ಲಿ ಉಪನ್ಯಾಸಕರೊಬ್ಬರು ತಮಗೆ ಕ್ಲಾಸ್ ನ್ನು ಕೇಳಿದ್ದಾರೆ. ನೀವು ಎಲಿಜೆಬಲ್ ಇಲ್ಲ ಎಂದುಕೊಂಡು ಅವರಿಗೆ ಕ್ಲಾಸ್ ನೀಡಿಲ್ಲ ಇದರಿಂದಾಗಿ ಅಸಮಾಧಾನಗೊಂಡಉಪನ್ಯಾಸಕ ಕೇಳಿದ ತರಗತಿ ಕೊಡದ ಪ್ರಿನ್ಸಿಪಾಲ್ ಮೇಲೆ ರೊಚ್ಚಿಗೆದ್ದು ಹಲ್ಲೆಯನ್ನು ಮಾಡಿದ ಆರೋಪ ಕೇಳಿ ಬಂದಿದೆ.

ಹೌದು ತರಗತಿ ನಡೆಸುವ ವಿಚಾರಕ್ಕೆ ಕಾಲೇಜ್ ಪ್ರಿನ್ಸಿಪಾಲ್ ಮತ್ತು ಲೆಕ್ಚರರ್ ನಡುವೆ ಗಲಾಟೆ‌ ನಡೆದಿದ್ದು ಹಲ್ಲೆ ನಡೆಸಿ ರುವ ಘಟನೆ ನಡೆದಿದೆ.ತುಮಕೂರು ನಗರದ ವಿದ್ಯೋ ದಯ ಲಾ ಕಾಲೇಜಿನ ಪ್ರಾಂಶುಪಾಲ ಎ.ನಾರಾಯಸ್ವಾಮಿ ಮೇಲೆ ಉಪನ್ಯಾಸಕ ಗಂಗಾಧರ್ ಹಲ್ಲೆ ನಡೆಸಿದ್ದಾರೆ. ಕೇಳಿದ ತರಗತಿ ಕೊಟ್ಟಿಲ್ಲವೆಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಮಾಡಲಾಗಿದೆ.ಎಲಿಜೆಬಲ್ ಇಲ್ಲ ಎಂದು ತರಗತಿ ನೀಡದೆ ಇದ್ದಿದ್ದಕ್ಕೆ ಗಲಾಟೆ ಪ್ರಾರಂಭವಾಗಿದೆ. ಈ ವೇಳೆ ಪ್ರಿನ್ಸಿಪಾಲ್ ಮೇಲೆ‌ ಉಪನ್ಯಾಸಕ ಗಂಗಾಧರ್ ಹಲ್ಲೆ ನಡೆಸಿದ್ದಾರೆ.ಸ್ಥಳಕ್ಕೆ ತುಮಕೂರಿನ ತಿಲಕ್ ಪಾರ್ಕ್ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿ ದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.