ಶಿಕ್ಷಕರ ಭಡ್ತಿ ವಿಚಾರದಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಯಾವುದೇ ಶಿಕ್ಷಕರಿಗೆ ತೊಂದರೆ ಯಾಗದಂತೆ ಪೂರ್ವಭಾವಿ ಕ್ರಮ – ಸುರೇಶ್ ಕುಮಾರ್ ಶಿಕ್ಷಕರಲ್ಲಿ ಮಾಹಿತಿ…..

Suddi Sante Desk

ಬೆಂಗಳೂರು –

1 ರಿಂದ 5 ನೇ ತರಗತಿಯಲ್ಲಿ ಬೋಧಿಸುವ ಶಿಕ್ಷಕರಿಗೆ ಪ್ರೌಢ ಶಾಲಾ ಶಿಕ್ಷಕರ ಹುದ್ದೆಗೆ ಪದೋನ್ನತಿ ನೀಡುವ ವಿಚಾರದಲ್ಲಿ ಯಾವುದೇ ಶಿಕ್ಷಕರಿಗೆ ಅನ್ಯಾಯ ಆಗಲು ಬಿಡೊದಿಲ್ಲವೆಂದಿದ್ದ ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈಗ ಕೆಎಟಿ ತೀರ್ಪಿನ ವಿರುದ್ಧ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ

ಹೇಳಿದಂತೆ ಈಗ ಸುರೇಶ್ ಕುಮಾರ್ ಅವರು ಶಿಕ್ಷಕರ ಪರ ನಿಂತುಕೊಂಡು ಹೈಕೋರ್ಟ್ ಗೆ ಮೇಲ್ಮ ನವಿ ಅರ್ಜಿ ಸಲ್ಲಿಸಿದ್ದಾರೆ ಈ ಒಂದು ಮಾಹಿತಿಯನ್ನು ಸ್ವತಃ ಅವರೇ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ

ಪೂರ್ವಭಾವಿ ಕ್ರಮವನ್ನು ತಗೆದುಕೊಳ್ಳುವ ಉದ್ದೇಶದಿಂದ ಇದನ್ನು ಮಾಡಲಾಗಿದೆ ಯಾವುದೇ ಕಾರಣಕ್ಕೂ ಯಾವುದೇ ಶಿಕ್ಷಕರು‌ ಆತಂಕವನ್ನು ಪಡಬಾರದು ಎಂದಿದ್ದಾರೆ

ಭಡ್ತಿ ವಿಚಾರದಲ್ಲಿ ಕೆಎಟಿ ನೀಡಿದ ತೀರ್ಪಿನ ಬೆನ್ನಲ್ಲೇ ಸಚಿವ ಸುರೇಶ್ ಕುಮಾರ್ ಅವರು ಯಾವುದೇ ಕಾರಣಕ್ಕೂ ಶಿಕ್ಷಕರಿಗೆ ಅನ್ಯಾಯ ಆಗಲು ಬಿಡೊದಿ ಲ್ಲ ಎಂದಿದ್ದರು ಈಗ ಅಂದುಕೊಂಡಂತೆ ನಡೆದು ಕೊಂಡು ಹೈಕೋರ್ಟ್ ಬಾಗಿಲು ತಟ್ಟಿದ್ದಾರೆ

ಒಟ್ಟಾರೆ ತಾವೊಬ್ಬ ಶಿಕ್ಷಕಿಯ ಮಗ ಎಂಬ ಮಾತಿಗೆ ಇಂದು ತಗೆದುಕೊಂಡ ಈ ಒಂದು ನಿರ್ಧಾರವೇ ಇವರಿಗೆ ಇವರ ಸರಳತೆಯ ವ್ಯಕ್ತಿತ್ವಕ್ಕೆ ಹಾಗೇ ಶಿಕ್ಷಕರ ಪರವಾಗಿ ಇದ್ದಾರೆ ಎಂಬೊದಕ್ಕೆ ಇದೇ ಸಾಕ್ಷಿಯಾಗಿ ಸಧ್ಯ ಅವರ ಪರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.