ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳದ ಬಗ್ಗೆ ಷಡಾಕ್ಷರಿ ಅವರಿಂದ ಮಾಹಿತಿ – ತುಟ್ಟಿ ಭತ್ಯೆ ವಿಚಾರದಲ್ಲಿ ಸಮಸ್ತ ರಾಜ್ಯದ ಸರ್ಕಾರಿ ನೌಕರರಿಗೆ ನೆಮ್ಮದಿ ನೀಡಿತು ರಾಜ್ಯಾಧ್ಯಕ್ಷರ ಸಂದೇಶ…..

Suddi Sante Desk
ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳದ ಬಗ್ಗೆ ಷಡಾಕ್ಷರಿ ಅವರಿಂದ ಮಾಹಿತಿ – ತುಟ್ಟಿ ಭತ್ಯೆ ವಿಚಾರದಲ್ಲಿ ಸಮಸ್ತ ರಾಜ್ಯದ ಸರ್ಕಾರಿ ನೌಕರರಿಗೆ ನೆಮ್ಮದಿ ನೀಡಿತು ರಾಜ್ಯಾಧ್ಯಕ್ಷರ ಸಂದೇಶ…..

ಬೆಂಗಳೂರು

ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳದ ಬಗ್ಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ ಹೌದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ DA ಯನ್ನು ಬಿಡುಗಡೆ ಮಾಡಬೇಕಾದಲ್ಲಿ ಕೇಂದ್ರ ಸರ್ಕಾರದ ಆದೇಶ ವಾದ ನಂತರ ಆ ಪ್ರತಿಯೊಂದಿಗೆ ರಾಜ್ಯ ಸರ್ಕಾರಕ್ಕೆ ಸಂಘದಿಂದ ಮನವಿಯನ್ನು ಸಲ್ಲಿಸಿ DA ಪಡೆಯುವುದು ನಿಯಮವಾಗಿರುತ್ತದೆ.

ಬಹಳಷ್ಟು ಜನ ನೌಕರರು DA ಕೊಡುತ್ತಾರೋ ಇಲ್ಲವೋ ಎಂಬ ಜಿಜ್ಞಾಸೆ ಗೊಂದಲದಲ್ಲಿದ್ದಾರೆ ಕೇಂದ್ರ ಸರ್ಕಾರ ಸಚಿವ ಸಂಪುಟದ ನಿರ್ಣಯ ವನ್ನು ತೆಗೆದುಕೊಂಡಿರುವ ವಿಚಾರ ಪತ್ರಿಕೆಗಳಲ್ಲಿ ವರದಿಯಾಗಿದೆ ಆದರೆ ಅಧಿಕೃತವಾಗಿ ಇನ್ನೂ ಕೇಂದ್ರ ಸರ್ಕಾರದ ಆದೇಶ ಹೊರ ಬಿದ್ದಿಲ್ಲ

ಹಾಗಾಗಿ ಕೇಂದ್ರ ಸರ್ಕಾರದ ಆದೇಶ ಬಂದ ನಂತರ ನಮ್ಮ ರಾಜ್ಯದಲ್ಲೂ ಸರ್ಕಾರಕ್ಕೆ ರಾಜ್ಯ ಸರ್ಕಾರಿ ನೌಕರ ಸಂಘದಿಂದ ಮನವಿಯನ್ನ ಸಲ್ಲಿಸಿ ಬಾಕಿ ಇರುವ DA ಯನ್ನು ಕೊಡಿಸಲಾಗು ವುದು.ಚುನಾವಣೆಗೂ DA ಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಸಂಘವು ಸ್ಪಷ್ಟೀಕ ರಿಸಿದೆ ಎಂದು ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರು ಹೇಳಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

ಸಿ ಎಸ್ ಷಡಕ್ಷರಿ. ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ. ಬೆಂಗಳೂರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.