This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಶಾಲಾ ಮಕ್ಕಳ ಕಲಿಕೆ ಗಾಗಿ ಈ ಶಿಕ್ಷಕರು ಮಾಡಿದ ಕೆಲಸ ನೋಡಿ ತುಂಬಾ ಖುಷಿಯಾಗುತ್ತದೆ…..

WhatsApp Group Join Now
Telegram Group Join Now

ಕನಕಪುರ –

ಶಿಕ್ಷಕರು ಕೇವಲ ಶಾಲೆಗೆ ಹೋಗಿ ಬಂದರೆ ಅಷ್ಟೇ ಅವರ ಕರ್ತವ್ಯ ಮುಗಿಯೊದಿಲ್ಲ ಇದರೊಂದಿಗೆ ಶಿಕ್ಷಕರಾದವರು ಯಾವಾಗಲೂ ಮಕ್ಕಳ ಕಲಿಕೆಗೆ ಸಾಕಷ್ಟು ಪ್ರಮಾಣದಲ್ಲಿ ಯೋಜನೆ ಯೋಚನೆ ಕಾರ್ಯ ಮಾಡಬೇಕು ಮಾಡುತ್ತಿರಬೇಕು‌.ಹೌದು ಹೀಗೆ ಮಾಡಿದಾಗ ಮಾತ್ರ ಅವರು ನಿಜವಾಗಿಯೂ ಪರಿಪೂರ್ಣ ಶಿಕ್ಷಕರಾಗಲು ಸಾಧ್ಯ.

ಇಂತಹ ಧ್ಯೇಯವನ್ನು ಇಟ್ಟುಕೊಂಡು ಶಿಕ್ಷಕ ಬಂಧುಗಳ ಟೀಮ್ ವೊಂದು ಕೆಲಸವನ್ನು ಮಾಡತಾ ಇದ್ದಾರೆ.ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಮನಗರ, ಹಾಗೆ ಕನಕಪುರ ತಾಲ್ಲೂಕು ಘಟಕದ ಶಿಕ್ಷಕ ಬಂಧುಗಳೇ ಈ ಒಂದು ಮಾತಿಗೆ ಸಾಕ್ಷಿ.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಟರಾಜು, ಸಂಘಟನಾ ಕಾರ್ಯದರ್ಶಿ ಜಿ.ಎಸ್‌. ಗೀತಾ, ತಾಲ್ಲೂಕು ನಿರ್ದೇಶಕರಾದ ಎನ್‌.ಜಿ. ರಾಜು, ಧರ್ಮನಾಯ್ಕ್‌, ಎಚ್‌.ಆರ್‌. ನಾಗರಾಜು ಸೇರಿದಂತೆ 20 ಶಿಕ್ಷಕರು ನೇತೃತ್ವದಲ್ಲಿ ಟೀಮ್ ಈ ಒಂದು ಅದ್ಭುತವಾದ ಕಾರ್ಯವನ್ನು ಮಾಡತಾ ಇದ್ದಾರೆ

ಕಲಿಲೆ ಶಾಲೆಯಲ್ಲಿ ಮಕ್ಕಳ ಕಲಿಕೆಗಾಗಿ ತಾಲ್ಲೂಕಿನ ಶಿಕ್ಷಕರ ತಂಡ ಗೋಡೆ ಬರಹದ ಮೂಲಕ ಕನ್ನಡ ಪರಿಸರ ವಿಜ್ಞಾನ,ಸಮಾಜ ಮತ್ತು ಗಣಿತಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ವರ್ಣರಂಜಿತವಾಗಿ ಬಿಡಿಸುವ ಕಾರ್ಯವನ್ನು ತಾಲ್ಲೂಕಿನ ಉಯ್ಯಲಪ್ಪನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಾಡಲಾಯಿತು

ಕಲಿಕೆಗಾಗಿ ಅಂದ ಚಂದ ಮಾಡಿದ ಶಾಲೆಯಲ್ಲಿ ಶಿಕ್ಷಕ ಬಂಧುಗಳು ಸೆಲ್ಪಿ

ಮರಳವಾಡಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಉಯ್ಯಲಪ್ಪನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5 ನೇ ತರಗತಿಯಿದ್ದು ನಲಿ-ಕಲಿ ಕಾರ್ಯಕ್ರಮದಲ್ಲಿ ಮಕ್ಕಳು ನೋಡಿಯೇ ಕಲಿಯುವುದಕ್ಕೆ ಉಪಯುಕ್ತವಾಗುವಂತೆ ಗೋಡೆಬರಹ ಕಾರ್ಯಕ್ರಮವನ್ನು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕ ಮಾಡಿತು

ಇದೇ ವೇಳೆ ಸಂಘದ ತಾಲ್ಲೂಕು ಅಧ್ಯಕ್ಷ ನೇ.ರಾ. ಪ್ರಭಾಕರ್‌ ಮಾತನಾಡಿ ಶಿಕ್ಷಕರ ಸಂಘ ಪ್ರತಿವರ್ಷ ಶಾಲಾ ವಾಸ್ತವ್ಯ ನಡೆಸಿ ಆ ಶಾಲೆಗೆ ಬೇಕಿರುವ ಎಲ್ಲಾ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡುವುದರ ಜೊತೆಗೆ ಶಾಲೆಗೆ ಬಣ್ಣ, ಆಟದ ಮೈದಾನ ಅಭಿವೃದ್ಧಿ, ಕಾಂಪೌಂಡ್‌ ನಿರ್ಮಾಣ ಮಾಡಿಕೊಡುವ ಕೆಲಸ ಮಾಡುತ್ತಿದ್ದೇವೆ ಎಂದರು.

ಇನ್ನೂ ಈ ಹಿಂದೆ ನಾವು ಮಾಡಿಕೊಂಡು ಬರುತ್ತಿದ್ದ ವಾಸ್ತವ್ಯ ಕಾರ್ಯಕ್ರಮ ಕೊರೊನಾ ಸೋಂಕಿನಿಂದ ಶಾಲಾ, ಕಾಲೇಜುಗಳಿಗೆ ರಜೆ ಇರುವುದರಿಂದ ಶಾಲಾ ವಾಸ್ತವ್ಯಕ್ಕೆ ಅವಕಾಶವಾಗಲಿಲ್ಲ.ಹಾಗಾಗಿ ಉಯ್ಯಲಪ್ಪನಹಳ್ಳಿ ಶಾಲೆಯನ್ನು ಆಯ್ಕೆ ಮಾಡಿಕೊಂಡು ಗೋಡೆ ಬರಹ ಮಾಡುವ ಕೆಲಸ ಮಾಡಿದ್ದೇವೆ.ಒಂದೇ ಕೊಠಡಿ ಇದ್ದು ಶಾಲೆಯು ಉತ್ತಮ ಸ್ಥಿತಿಯಲ್ಲಿದ್ದರಿಂದ ಹೆಚ್ಚಿನದೇನು ಕೆಲಸವಿರಲಿಲ್ಲ.ಹಲವು ಶಿಕ್ಷಕರು ಸೇರಿ ಒಂದೇ ದಿನದಲ್ಲಿ ಗೋಡೆ ಬರಹ ಪೂರ್ಣ ಮಾಡಿದ್ದಾಗಿ ಹೇಳಿದರು.

ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ಕಲಾವಿದ ಕಾಳಯ್ಯ,ಶಾಲಾ ಮುಖ್ಯ ಶಿಕ್ಷಕ ಮಾರುತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ್,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ,ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಟರಾಜು, ಸಂಘಟನಾ ಕಾರ್ಯದರ್ಶಿ ಜಿ.ಎಸ್‌. ಗೀತಾ, ತಾಲ್ಲೂಕು ನಿರ್ದೇಶಕ ರಾದ ಎನ್‌.ಜಿ. ರಾಜು, ಧರ್ಮನಾಯ್ಕ್‌, ಎಚ್‌.ಆರ್‌. ನಾಗರಾಜು ಸೇರಿದಂತೆ 20 ಶಿಕ್ಷಕರು ಈ ಒಂದು ವಿಶೇಷ ಅರ್ಥ ಪೂರ್ಣವಾದ ಕಾರ್ಯದಲ್ಲಿ ಪಾಲ್ಗೊಂಡು ಮಕ್ಕಳ ಕಲಿಕೆಗೆ ನೆರವಾದರು.


Google News

 

 

WhatsApp Group Join Now
Telegram Group Join Now
Suddi Sante Desk