ಆಸ್ತಿಗಾಗಿ ತಾಯಿ ,ಸಹೋದರಿಯ ಮೇಲೆ ಟ್ಯಾಕ್ಟರ್ ಹತ್ತಿಸಿ ಕೊಲೆ – ಹೆತ್ತ ಮಗನಿಂದಲೇ ಹೀನ ಕೃತ್ಯ

Suddi Sante Desk

ದಾವಣಗೆರೆ –

ಆಸ್ತಿ ಹಾಗೂ ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ತಾಯಿ ಮತ್ತು ಸಹೋದರಿಯ ಮೇಲೆಯೇ ಟ್ರಾಕ್ಟರ್ ಹತ್ತಿಸಿ‌ ಕೊಲೆ ಮಾಡಿರುವ ಭೀಬತ್ಸ ಘಟನೆ ದಾವಣಗೆರೆಯಲ್ಲಿ ನಡೆದಿದೆ.ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಯಕ್ಕೆಗುಂದಿ ಗ್ರಾಮದಲ್ಲಿ ಈ ಒಂದು ಧಾರುಣ ಘಟನೆ ನಡೆದಿದೆ.


64 ವರ್ಷ ದ ಸರೋಜಮ್ಮ ಹಾಗೂ ಸಹೋದರಿ 42 ವರ್ಷದ ಜ್ಯೋತಿ ಕೊಲೆಯಾದ ತಾಯಿ ಮತ್ತು ಮಗಳಾಗಿದ್ದಾರೆ‌.ಕೊಲೆಯಾಗಿರುವ ಸರೋಜಮ್ಮನ ಮಗ ಹಾಗೂ ಜ್ಯೋತಿಯ ಸಹೋದರ ಭರಮನಗೌಡನೇ ಈ ಹೀನ ಕೃತ್ಯ ಮೆರೆದಿದ್ದಾನೆ.

ಘಟನೆ ಬಳಿಕ ಬರಮನಗೌಡ ಗ್ರಾಮದಿಂದ ಪರಾರಿಯಾಗಿದ್ದಾನೆ.ಇವರ ಮಧ್ಯ ಆಸ್ತಿ ವಿಚಾರವಾಗಿ ಆಗಾಗ ಕಲಹ ನಡೆಯುತ್ತಿತ್ತು. ಇದೀಗ ಆಸ್ತಿ ಬೇಕೆಂದು ಜ್ಯೋತಿ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದರು.

ಕೇಸ್ ಹಿಂತೆಗೆದುಕೊಳ್ಳುವಂತೆ ಭಮನಗೌಡ ಒತ್ತಾಯ ಮಾಡುತ್ತಿದ್ದ. ಇಂದು ಕೂಡ ಜಮೀನಿನ ಬಳಿ ಇಬ್ಬರು ನಡೆದುಕೊಂಡು ಹೋಗುವಾಗ ಕೇಸ್ ವಿಚಾರವಾಗಿ ಜಗಳ ನಡೆದಿದ್ದು ಸ್ಥಳದಲ್ಲೆ ತಾಯಿ ಮತ್ತು ಸಹೋದರಿಯನ್ನ ಕಾಲುವೆಗೆ ದೂಡಿ ಅವರ ಮೇಲೆ ಟ್ರ್ಯಾಕ್ಟರ್ ಹಾಯಿಸಿದ್ದಾನೆ.

ಬಳಿಕ ಅವರನ್ನು ಕಬ್ಬಿಣ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಘಟನೆಯಲ್ಲಿತಾಯಿ ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರ ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.