ಕಾರ್ಕಳ –
ವಿದ್ಯುತ್ ಸೌಲಭ್ಯ ವಂಚಿತ ಅತ್ಯಂತ ಕಡು ಬಡತನ ದಲ್ಲಿ ರುವ ರೆಂಜಾಳ ಸರಕಾರಿ ಪ್ರೌಢಶಾಲೆಯ 10ನೆ ತರಗತಿ ವಿದ್ಯಾರ್ಥಿನಿ ಪುಷ್ಪ ಎಂಬವರ ಮನೆಗೆ ಇಂದು ಭೇಟಿ ನೀಡಿದ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ಎನ್.ಎಚ್. ನಾಗೂರ ವಿದ್ಯಾರ್ಥಿಯ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ವಾಗಿ ಸೋಲಾರ್ ಲ್ಯಾಂಪ್ ಅನ್ನು ನೀಡಿದರು.

ಇದೇ ಸಂದರ್ಭದಲ್ಲಿ ಎನ್.ಎಚ್ನಾಗೂರ ರೆಂಜಾಳ ಪ್ರೌಢಶಾಲೆಗೆ ಭೇಟಿ ನೀಡಿ ಸಮಾಜ ವಿಜ್ಞಾನ ಡಿಜಿಟ ಲ್ ಲ್ಯಾಬ್ ನ್ನು ವೀಕ್ಷಿಸಿದರು.ಜಿಲ್ಲಾ SSLC ನೋಡಲ್ ಅಧಿಕಾರಿ ಜಾನ್ಹವಿ ಸಿ. ಶಾಲಾ ಸಮಾಜ ವಿಜ್ಞಾನ ಶಿಕ್ಷಕ ವಿನಾಯಕ ನಾಯ್ಕ ಹಾಗೂ ಜೀವ ವಿಜ್ಞಾನ ಶಿಕ್ಷಕ ಸುನಿಲ್, ಕನ್ನಡ ಭಾಷಾ ಶಿಕ್ಷಕ ಮಂಜು ನಾಥ್ ಕುಲಾಲ್ ಉಪಸ್ಥಿತರಿದ್ದರು.