ಸಿಡಿ ವಿಚಾರ ಕುರಿತು ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಹೇಳಿಕೆ

Suddi Sante Desk

ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ರಮೇಶ ಜಾರಕಿಹೊಳಿ ಸಿಡಿ ವಿಚಾರ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಸಚಿವರು ಸಿಡಿ ವಿಚಾರ ವಾಗಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತ ನಾಡಿ ಎಸ್ ಐಟಿ ತನಿಖೆ ನಡೆಯುತ್ತಿದೆ‌ ತನಿಖೆ ಪೂರ್ಣ ಆಗಿ ಎಲ್ಲಾ ಸತ್ಯಾಂಶ ಹೊರಬರಲಿದೆ ಎಂದರು.

ಸರ್ಕಾರವೇ ಬೀಳಿಸಿದ್ದಿನಿ ಇದ್ಯಾವ ಲೆಕ್ಕ ಎನ್ನೋ ರಮೇಶ್ ಹೇಳಿಕೆಗೆ ಶೆಟ್ಟರ್ ನೋ ಕಮೆಂಟ್ ಎನ್ನುತ್ತಾ ನೋಡೋಣ ನೋಡೋಣ ಎಂದರು.

ಇನ್ನೂ ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ ಏನೇ ಇದ್ದರೂ ರಾಜಕಾರಣಿ ಗಳಿಗೆ ನೈತಿಕತೆ ಮುಖ್ಯ ಭಾರತೀಯ ರಾಜಕಾರಣಿ ಗಳಿಗೆ ವಿಶೇಷ ಗೌರವವಿದೆ‌.ನಮ್ಮನ್ನ ಅನುಕರಣೆ ಮಾಡೋ ಜನ ಇರ್ತಾರೆ ನಾವು ಗೌರವದಿಂದ ಇರಬೇಕೆಂದರು.

ಆರೋಗ್ಯ ಸಚಿವ ಸುಧಾಕರ್ ರವರ ಏಕಪತ್ನಿ ವ್ರತಸ್ಥ ಹೇಳಿಕೆ ವಿಚಾರ ಕುರಿತಂತೆ ಮಾತನಾಡಿ ಸುಧಾಕರ್ ಹೇಳಿಕೆ ಸರಿಯಲ್ಲ ಆ ರೀತಿ ಹೇಳಿಕೆ ಕೊರಬಾರದಿತ್ತು ಬೇರೆಯವರನ್ನ ನೋಡಿ ನಾವು ಅನುಸರಿಸೋದಲ್ಲ ನಮಗೆ ನಾವು ಸರಿಯಾಗಿ ಇರಬೇಕು ಬೆಳಗಾವಿ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ ಮೋದಿ,ಸುರೇಶ ಅಂಗಡಿಯರು ಮಾಡಿದ ಅಭಿವೃದ್ದಿ ಕೆಲಸದ ಮೇಲೆ ಚುನಾವಣೆ ನಡೆಯುತ್ತೆ ಎಂದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.