This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಎಸಿಬಿ ಬಲೆಗೆ ಜೈಲು ಅಧಿಕಾರಿ – ಖೈದಿಗೆ ಹೆಚ್ಚಿನ ಚಿಕಿತ್ಸೆಗೆ ಅನುಮತಿಗಾಗಿ 90 ಸಾವಿರ ಲಂಚ ಪಡೆಯುವಾಗ ಬಲೆಗೆ ಬಿದ್ದ ಅಧಿಕಾರಿ

WhatsApp Group Join Now
Telegram Group Join Now

ಬೀದರ –

ಬೀದರ್ ನಲ್ಲಿ ಎಸಿಬಿ ಅಧಿಕಾರಿಗಳು ಭರ್ಜರಿ ಭೇಟಿಯಾಡಿದ್ದಾರೆ. ಬೀದರ ಕಾರಾಗೃಹದಲ್ಲಿನ ಖೈದಿಯೊಬ್ಬರಿಗೆ ಹೆಚ್ಚಿನ ಚಿಕಿತ್ಸೆ ನೀಡಲು 90 ಸಾವಿರ ಹಣವನ್ನು ಬೇಡಿಕೆ ಇಟ್ಟಿದ್ದ ಜೈಲಿನ ಅಧಿಕಾರಿಯನ್ನು ಅಧಿಕಾರಿಗಳು ಬಲೆಗೆ ಹಾಕಿದ್ದಾರೆ.

ಹೌದು ಎಸಿಬಿ ಬಲೆಗೆ ಜೈಲು ಅಧಿಕಾರಿ ಬಿದ್ದಿದ್ದಾರೆ.ಖೈದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಅನುಮತಿ ನೀಡಲು 90 ಸಾವಿರ ರೂಪಾಯಿ ಹಣದ ಬೇಡಿಕೆಯನ್ನು ಇಟ್ಟಿದ್ದರು. ಜಿಲ್ಲಾ ಕಾರಾಗೃಹ ಸಹಾಯಕ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ತಡರಾತ್ರಿ ನಗರದಲ್ಲಿ ಈ ಒಂದು ಘಟನೆ ನಡೆದಿದೆ. ಬಸವರಾಜ ಹೊಸಗೌಡರ್ ಜೈಲರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಕಾರಾಗೃಹದಲ್ಲಿದ್ದ ಖೈದಿಯೊಬ್ಬರು ಅನಾರೋಗ್ಯದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇತ್ತು ಇವರಿಗೆ.

ಹೆಚ್ಚಿನ ಚಿಕಿತ್ಸೆ ನೀಡಲು 90 ಸಾವಿರ ಹಣವನ್ನು ನೀಡುವಂತೆ ಜೈಲರ್ ಬೇಡಿಕೆ ಇಟ್ಟಿದ್ದರು. ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದ ಆದರ್ಶ ಎಂಬುವವರ ತಂದೆಗೆ ಹೆಚ್ಚಿನ ಚಿಕಿತ್ಸೆಗೆ ಅನುಮತಿ ನೀಡಲು ಜೈಲು ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಜೈಲು ವಸತಿ ಗೃಹದಲ್ಲಿ ಲಂಚದ ಹಣವನ್ನು ಪಡೆಯುತ್ತಿದ್ದಾಗ ದಾಳಿ ನಡೆಸಲಾಗಿದೆ. ಡಿಎಸ್‌ಪಿ ಹನುಮಂತರಾಯ್ , ಇನಸ್ಪೇಕ್ಟರ್ ಅಧಿಕಾರಿಗಳಾದ ವೆಂಕಟೇಶ , ಶರಣಬಸಪ್ಪ ಮತ್ತಿತರರು ದಾಳಿಯಲ್ಲಿ ಭಾಗವಹಿಸಿದ್ದರು .


Google News

 

 

WhatsApp Group Join Now
Telegram Group Join Now
Suddi Sante Desk