ಡಯಟ್ ನ ಮಹಿಳಾ ಸಿಬ್ಬಂದಿ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಗೆ ಖಂಡನೆ – ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸೂಕ್ತ ಕ್ರಮಕ್ಕೆ ಒತ್ತಾಯ…… 

Suddi Sante Desk

ಬೆಂಗಳೂರು – 

ಹಾಡು ಹಗಲೇ ನಿನ್ನೆ ಮಂಗಳೂರಿನ ಡಯಟ್ ನಲ್ಲಿ ನಡೆದ ಮಹಿಳಾ ಸಿಬ್ಬಂದಿಗಳ ಮೇಲಿನ ಮಾರಣಾಂ ತಿಕ ಹಲ್ಲೆ ಗೆ ಖಂಡನೆ ವ್ಯಕ್ತವಾಗಿದೆ ಮಹಿಳಾ ಸಿಬ್ಬಂದಿ ಗಳ ಮೇಲೆ ನಡೆದ ತಲ್ವಾರ್ ದಾಳಿಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಖಂಡಿಸಿದೆ‌.

ಹೌದು ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಈ ಒಂದು ವಿಚಾರ ಕುರಿತು ಧ್ವನಿ ಎತ್ತಿ ಘಟನೆ ಯನ್ನು ಖಂಡಿಸಿದರು.

ಹಾಡು ಹಗಲೇ ಡಯಟ್ ನ ಒಳಗೆ ನುಗ್ಗಿ ಮಹಿಳಾ ಸಿಬ್ಬಂದಿ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಸಂಘವು ಖಂಡಿಸುತ್ತದೆ.

ಸರ್ಕಾರಿ ಕಚೇರಿಯಲ್ಲಿ ಸರ್ಕಾರಿ ನೌಕರರಿಗೆ ಸೂಕ್ತ ಭದ್ರತೆ ರಕ್ಷಣೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮತ್ತು ಸಮಸ್ತ ಸಂಘದ ಪರವಾಗಿ ಗೃಹ ಸಚಿವರಿಗೆ ಒತ್ತಾಯವನ್ನು ಮಾಡಿ ಆರೋಪಿಗಳನ್ನು ಬಂಧನ ಮಾಡಿ ಸೂಕ್ತ ಕ್ರಮಕ್ಕೆ ಒತ್ತಾಯವನ್ನು ಮಾಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.