ಹಣಕ್ಕಾಗಿ ಮಾಜಿ ಸಚಿವರ ಕಿಡ್ನಾಫ್ – ಹಣವೂ ಸಿಗಲಿಲ್ಲ – ಸ್ಕೇಚ್ ಹಾಕಿದವರು ಪೊಲೀಸರಿಗೆ ಬಲೆಗೆ

Suddi Sante Desk

ಕೋಲಾರ –

ಅದು ಸೆಂಟ್ರಲ್ ಜೈಲ್ನಲ್ಲಿದ್ದ ಆ ಇಬ್ಬರು ಖೈದಿಗಳು ಅಧಿಕಾರಿಯೊಬ್ಬನ ಮಾತುಕೇಳಿ ಹಾಕಿದ್ದ ಸ್ಕೆಚ್ .ಮಾತು ಕೇಳಿ ಮಾಜಿ ಸಚಿವನನ್ನು ಕಿಡ್ನಾಪ್ ಮಾಡಿ ಬೃಹತ್ ಮೊತ್ತದ ಹಣವನ್ನು ವಸೂಲಿ ಮಾಡುವ ಪ್ಲಾನ್ ಅವರದಾಗಿತ್ತು, ಅಂದುಕೊಂಡಂತೆ ಸ್ಕೆಚ್ ಆಗಿತ್ತು ಆದರೆ ಅಂದುಕೊಂಡಷ್ಟು ಹಣ ಸಿಗಲಿಲ್ಲ. ಸ್ಕೆಚ್ ಹಾಕಿದ್ದ ಆರೋಪಿಗಳು ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಅಂದರ್ ಆಗಿದ್ದಾರೆ ಹೌದು ಇದು ಕೋಲಾರದಲ್ಲಿನ ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದ ಕಹಾನಿ.

ಮಾಜಿ ಸಚಿವ ವರ್ತೂರ ಪ್ರಕಾಶ್

ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು ಈ ಒಂದು ಪ್ರಕರಣ. ಸಾಕಷ್ಟು ಪ್ರಭಾವಿ ಮುಖಂಡರೊಬ್ಬರನ್ನು ಕಿಡ್ನಾಪ್ ಮಾಡಿದ್ದಾರೆ ಅಂದ್ರೆ ಇನ್ನು ಸಾಮಾನ್ಯ ಜನರ ಪಾಡೇನು ಎನ್ನುವಷ್ಟರ ಮಟ್ಟಿಗೆ ಅದು ಸದ್ದು ಮಾಡಿತ್ತು. ಅಷ್ಟೇ ಅಲ್ಲಾ ಈ ಪ್ರಕರಣ ವರ್ತೂರ್ ಪ್ರಕಾಶ್ ವಿರುದ್ದ ಸಾಕಷ್ಟು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿತ್ತು . ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದ ಈ ಒಂದು ಕಿಡ್ನಾಪ್ ಪ್ರಕರಣ ಆಗಿ 20 ದಿನಗಳ ನಂತರ ಕೋಲಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 11 ದಿನಗಳ ನಂತರ ಕಿಡ್ನಾಪ್ನ ಮಾಡಿದ್ದ ಕಿಂಗ್ ಪಿನ್ ಕವಿರಾಜ್ ಬಂಧನವಾಗಿದೆ.

ಈ ಮೂಲಕ ಎಲ್ಲಾ ಅನುಮಾನಗಳಿಗೂ ಪೊಲೀಸರು ಉತ್ತರವನ್ನು ಕೊಟ್ಟಿದ್ದಾರೆ. ಕಿಡ್ನಾಪ್ ಪ್ರಕರಣಕ್ಕೂ ಸ್ಪಷ್ಟವಾದ ಉತ್ತರವೂ ಸಿಕ್ಕಿದೆ. ವರ್ತೂರ್ ಪ್ರಕಾಶ್ ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿಯನ್ನು ಕೋಲಾರ ಪೊಲೀಸರ ತಂಡ ಯಶಸ್ವಿಯಾಗಿ ಭೇದಿಸಿದ್ದಾರೆ, ಕಿಡ್ನಾಪರ್ಸ್ ಚಾಪೆಕೆಳಗೆ ನುಸುಳಿದ್ರೆ ಪೊಲೀಸರು ರಂಗೋಲಿ ಕೆಳಗೆ ನುಸುಳಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಕವಿರಾಜ್ ಅಂಡರ್ವರ್ಡ್ ರವಿಪೂಜಾರಿ ಬಂಟ ಎನ್ನಲಾಗಿದೆ ಮೂಲತಃ ತಮಿಳುನಾಡಿನ ಹೊಸೂರಿನವನಾಗಿದ್ದು, ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಚೇಜ್ ಮಾಡಿದ ನಮ್ಮ ಕೋಲಾರ ಪೊಲೀಸರ ತಂಡ ಒಳ್ಳೇಯ ಕಾರ್ಯವನ್ನು ಮಾಡಿದ್ದಾರೆ.

ತಮಿಳುನಾಡಿನಲ್ಲಿ ಬಂಧಿಸಿ ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸದ್ಯ ಮತ್ತೆ ಕೋಲಾರ ಪೊಲೀಸರು ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿ ಕವಿ ರಾಜ್ ನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ಪ್ರಕರಣದ ಉಳಿದ ಆರೋಪಿಗಳನ್ನು ಬಂಧಿಸುವ ಜೊತೆಗೆ ಇಡಿ ಪ್ರಕಣದ ಸತ್ಯಾಂಶವನ್ನು ಬಿಚ್ಚಿಡಲಿದ್ದಾರೆ.

ಇನ್ನು ಕಿಡ್ನಾಪ್ ಗೂ ಮೊದಲು ಮಾಸ್ಟರ್ ಮೈಂಡ್ ಕವಿರಾಜ್ ಹಾಗೂ ಆತನ ಸ್ನೇಹಿತ ರೋಹಿತ್ ಇಬ್ಬರೂ ಜೈಲಿನಲ್ಲಿದ್ದರು. ಅಲ್ಲಿ ಅಧಿಕಾರಿಯೊಬ್ಬರ ಮಾತು ಕೇಳಿ ವರ್ತೂರ್ ಪ್ರಕಾಶ್ ಬಳಿ ಸಾಕಷ್ಟು ಹಣವಿದೆ, ಕಳೆದ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದ ವೇಳೆ ಸಾಕಷ್ಟು ಹಣ ಮಾಡಿದ್ದಾರೆಂದು ಹೇಳಿದ್ದಾರೆ. ಅದೇ ಪ್ಲಾನ್ನನ್ನು ವರ್ಕೌಟ್ ಮಾಡಿದ ರೋಹಿತ್ ಮತ್ತು ಕವಿರಾಜ್ ತಾವಂದುಕೊಂಡಂತೆ ವರ್ತೂರ್ ಪ್ರಕಾಶ್ ರನ್ನು ಕಿಡ್ನಾಪ್ ಮಾಡಿದ್ದರು ಎನ್ನಲಾಗಿದೆ.

ಸದ್ಯ ಕಿಡ್ನಾಪ್ ಪ್ರಕರಣದ ಕಿಂಗ್ ಪಿನ್ ಕವಿ ರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತಂತೆ ಮಾತನಾಡಿದ ವರ್ತೂರ್ ಪ್ರಕಾಶ್ ಕಠಿಣವಾಗಿದ್ದ ಕಿಡ್ನಾಪ್ ಪ್ರಕರಣವನ್ನು ಬೆಂಗಳೂರು ಪೊಲೀಸರ ರೀತಿಯಲ್ಲಿ ಕೋಲಾರ ಪೊಲೀಸರು ಕೂಡಾ ಅತಿ ಯಶಸ್ವಿಯಾಗಿ ಇಷ್ಟು ಬೇಗ ಬೇದಿಸಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ, ಹಾಗಾಗಿ ಕೋಲಾರ ಪೊಲೀಸರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಅವರನ್ನು ಸಂಪೂರ್ಣ ವಿಚಾರಣೆ ನಡೆಸಿ ಕಿಡ್ನಾಪ್ ಪ್ರಕರಣ ಹಣಕ್ಕಾಗಿ ನಡೆದದ್ದಾ ಇಲ್ಲಾ ಯಾರಾದ್ರೂ ಸುಪಾರಿ ಕೊಟ್ಟಿದ್ರಾ ಅನ್ನೋ ಎಲ್ಲಾ ವಿಚಾರಗಳಿಗೆ ಉತ್ತರವನ್ನು ಪೊಲೀಸರು ಹುಡುಕಲಿ ಎಂದು ಒತ್ತಾಯಿಸಿದ್ರು. ಒಟ್ಟಾರೆ ಮಾಜಿ ಸಚಿವ ವರ್ತೂರ್ ಪ್ರಕಾಶ್ ಕಿಡ್ನಾಪ್ ಪ್ರಕರಣ ಪೊಲೀಸರಿಗೆ ಒಂದು ದೊಡ್ಡ ಚಾಲೆಂಜ್ ಆಗಿತ್ತು ಆದ್ರೆ ಅದನ್ನು ಬೇದಿಸಿ ಖುಷಿ ಪೊಲೀಸರಿಗಿದ್ರೆ, ಕಿಡ್ನಾಪ್ ಪ್ರಕರಣದಿಂದ ತನ್ನ ಸುತ್ತ ಸುತ್ತಿಕೊಂಡಿದ್ದ ಹಲವು ಅನುಮಾನಗಳಿಗೆ ತೆರೆ ಬೀಳುತ್ತೆ ಅನ್ನೋ ಸಂತೋಷ ವರ್ತೂರ್ ಪ್ರಕಾಶ್ ಅವರದ್ದು. ಒಟ್ಟಾರೆ ಪ್ರಕರಣ ಸುಖಾಂತ್ಯ ಕಂಡಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.