ಕಲಬುರ್ಗಿ –
ತಂಗಿಯ ಎಂಗೇಜಮೆಂಟಗೆ ತರಕಾರಿ ಖರೀದಿಗೆ ಹೋಗಿದ್ದ ಅಣ್ಣನನ್ನು ಕೊಲೆ ಮಾಡಿರುವ ಘಟನೆ ಕಲಬುರಗಿ ಯಲ್ಲಿ ನಡೆದಿದೆ.ಹೌದು ಯುವಕನ ತಂಗಿಯ ಪ್ರೀತಿಸುತ್ತಿದ್ದ ಯುವಕನ ಹಾಗೂ ಆತನ ಸ್ನೇಹಿತರಿಂದ ನಡೆದ ಕೊಲೆಯಾಗಿದೆ.

ಕಲಬುರಗಿ ಹೊರವಲಯದ ಕೋಟನೂರ ಬಳಿಯ ತರಕಾರಿ ಮಾರ್ಕೆಟ್ ನಲ್ಲಿ ಈ ಒಂದು ಕೊಲೆ ನಡೆ ದಿದೆ.ನಿಖಿಲ್ (24) ಕೊಲೆಯಾದ ದುರ್ದೈವಿ ಆಗಿ ದ್ದಾನೆ.ಈತನ ತಂಗಿಯ ಎಂಗೇಜಮೆಂಟ್ ಬೇರೊಬ್ಬ ಯುವಕನ ಜೊತೆ ನಡೆಯಬೇಕಿತ್ತು.ಎಂಗೇಜ್ ಮೆಂಟ್ ಕಾರ್ಯಕ್ರಮಕ್ಕಾಗಿ ತಾಯಿ ಮತ್ತು ಅಣ್ಣ ನೊಂದಿಗೆ ತರಕಾರಿ ಖರೀದಿಗೆ ತೆರಳಿದ್ದ ನಿಖಿಲ್

ತರಕಾರಿ ಖರೀದಿ ವೇಳೆ ಕಾರನಲ್ಲಿ ಬಂದ ವಿಶಾಲ ಮತ್ತು ತಂಡದಿಂದ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿದೆ.ನಿಖಿಲ್ ಸ್ಥಳದಲ್ಲೇ ಸಾವಿಗೀಡಾ ಗಿದ್ದು, ಆತನ ತಾಯಿ ಅಣ್ಣನಿಗೂ ಗಂಭೀರ ಗಾಯಗ ಳಾಗಿವೆ.

ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.ಸಾವಿರಾರು ಜನರ ಸಮ್ಮುಖದಲ್ಲೇ ನಡೆದ ಬರ್ಬರ ಹತ್ಯೆಯಾಗಿದೆ.ಕಲಬುರಗಿಯ ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ